ಕಿಡಿಗೇಡಿಗಳು ಕಟಾವು ಮಾಡಿದ್ದ ಹುರುಳಿಗೆ ಬೆಂಕಿ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಕೂತಾಂಡಹಳ್ಳಿ ಗ್ರಾಮದ ರೈತ ರಾಘವೇಂದ್ರ ಎಂಬುವರಿಗೆ ಸೇರಿದ ಮೂರು ಎಕರೆಯ ಹುರುಳಿ ಕಾಳು ಫಸಲು ಸುಟ್ಟು ಭಸ್ಮವಾಗಿದೆ.ಫಸಲು ಕಟಾವು ಮಾಡಿ ಜಮೀನಿನ ಬಳಿ ಇಡಲಾಗಿತ್ತು.ಕಳೆದ ರಾತ್ರಿ ಕಿಡಿಗೇಡಿಗಳ ಕೃತ್ಯಕ್ಕೆ ಇಡೀ ಫಸಲು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ಬೆಲೆಯ ಹುರುಳಿ ಸುಟ್ಟು ಕರಕಲಾಗಿದೆ.ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ […]