ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಯುವಕರ ಗುಂಪೊಂದು ಕ್ರಿಕೆಟ್ ಆಟವಾಡುತ್ತಿರುವಾಗ ಪೊಲೀಸ್ ವಾಹನ ಕಂಡು ದ್ವಿಚಕ್ರ ವಾಹನಗಳನ್ನು ಬಿಟ್ಟು ಪರಾರಿಯಾದ ಘಟನೆ ಶನಿವಾರ ನಡೆದಿದೆ. ಮಾಸ್ಕ್ ಹಾಗೂ ಅಂತರ ಕಾಯ್ದುಕೊಳ್ಳದೇ ಕ್ರಿಕೆಟ್ ಆಟವಾಡುತ್ತಿದ್ದರು ಪೊಲೀಸ್ ವಾಹನ ಕಂಡು ಪರಾರಿಯಾದ ಯುವಕರನ್ನು ಕರೆಸಿಕೊಂಡು ಪಿಎಸ್ಐ ಎಲ್.ಕಾಂತರಾಜು ಖಡಕ್ ವಾರ್ನಿಂಗ್ ನೀಡಿದರು. ಕ್ರೀಡೆ ಆಡುವುದು ಮಾನಸಿಕ ಹಾಗೂ ದೈಹಿಕವಾಗಿ ತುಂಬಾ ಒಳ್ಳೆಯದು ಆದರೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಸಾವು ನೋವು […]