ದೇವಸ್ಥಾನದ ಬೀಗ ಒಡೆದು ಹುಂಡಿ ಕಳವು ಮಾಡಿರುವ ಘಟನೆ ಮಾಲೂರು ನಗರದ ವೈಟ್ ಗಾರ್ಡನ್ ಬಳಿ ನಡೆದಿದೆ. ಸಾಯಿ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ಮಾಡಿ ಹುಂಡಿ ಸಮೇತ ಕಳ್ಳರು ಪರಾರಿಯಾಗಿದ್ದಾರೆ.ಹುಂಡಿಯಲ್ಲಿ ಸುಮಾರು 30 ಸಾವಿರ ಅಂದಾಜು ಹಣವಿದ್ದು,ಸ್ಥಳಕ್ಕೆ ಮಾಲೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಪ್ರಕರಣ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ :ಏರಿಕೆಯಾಗುತ್ತಲೇ ಇದೆ ಪೆಟ್ರೋಲ್ – ಡಿಸೇಲ್ ಬೆಲೆ
#Mallur
ಚಿರತೆ ದಾಳಿಗೆ ಎರಡು ಕುರಿ ಬಲಿಯಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ದಿನ್ನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ. ನಾರಾಯಣಪ್ಪ ನವರಿಗೆ ಸೇರಿದ ಕುರಿಗಳು ಬೆಳಗ್ಗಿನ ಜಾವ ಸುಮಾರು 3 ಘಂಟೆಯ ಸಮಯದಲ್ಲಿ ಚಿರತೆ ದಾಳಿಮಾಡಿದೆ. ಪದೇ ಪದೇ ಗ್ರಾಮದ ಸುತ್ತ ಮುತ್ತ ಕಾಣಿಸಿಕೊಳ್ಳುತ್ತಿರುವ ಚಿರತೆ. ಅರಣ್ಯ ಇಲಾಖೆಯ ವಿರುದ್ಧ ಶಾಪ ಹಾಕುತ್ತಿರುವ ಗ್ರಾಮದ ಜನರು… ಇದನ್ನೂ ಓದಿ :ಟಿಸಿಯಲ್ಲಿ ಹೊತ್ತಿ ಉರಿದ ಬೆಂಕಿ
ತಿಪ್ಪೆ ಗುಂಡಿಯಲ್ಲಿ ಅನಾಥ ಹೆಣ್ಣು ಶಿಶು ಪತ್ತೆಯಾಗಿರುವ ಘಟನೆ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಚಿಕ್ಕನಾಯಕನಹಳ್ಳಿ ಗ್ರಾಮದ ಬಳಿ ನಡೆದಿದೆ…. ನವಜಾತ ಶಿಶುವನ್ನು ಗೋಣಿ ಚೀಲದಲ್ಲಿ ಹಾಕಿ ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದ್ದು,ಶಿಶು ಕೂಗನ್ನು ಗಮನಿಸಿದ ಸ್ಥಳೀಯರಿಂದ ಶಿಶುವಿನ ಆರೈಕೆ ಮಾಡಲಾಗಿದೆ..ತೊರಲಕ್ಕಿ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ….. ಇದನ್ನೂ ಓದಿ :ಬೆಳ್ಳಂಬೆಳಗ್ಗೆ ರೈತರ ಜಮೀನಿನಲ್ಲಿ ಪ್ರತ್ಯಕ್ಷವಾದ ಕಾಡಾನೆ