ರಾಯಚೂರಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾತ್ರಿ ೯ ರಿಂದ ಬೆಳಗ್ಗೆ ೫ ರವರೆಗೆ ಕರ್ಫೂವನ್ನ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶವನ್ನ ಹೊರಡಿಸಿದ್ದಾರೆ. ಮಾಸ್ಕ್ ಧರಿಸಿದೆ ಓಡಾಡಿದರೆ ದಂಡ ವಿಧಿಸಲಾಗುವುದು ಸಾಮಾಜಿಕ ಅಂಥರವನ್ನ ಸರಿಯಾಗಿ ಕಾಪಾಡಿಕೊಳ್ಳಬೇಕು, ಮದುವೇ ಮನೆಗಳಲ್ಲಿ ೫೦ ಜನಕ್ಕೂ ಹೆಚ್ಚಿನ ಜನರು ಸೇರುವಂತಿಲ್ಲ, ಹಾಗು ಶವಸಂಸ್ಕಾರಕ್ಕೆ ೨೦ ಜನರಿಗೆ ಹೆಚ್ಚಿನ ಜನ ಸೇರುವಂತಿಲ್ಲ ಅಂತ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.