ರಾವಂದೂರಿನ ಹಾಸ್ಟೆಲ್ ವಾರ್ಡ್ನ್ ಎಚ್.ರಾಜಯ್ಯ ಎಂಬುವವರಿಗೆ ನೀಡಲಾಗಿದ್ದ ಕಾರಣ ಕೇಳಿ ನೋಟಿಸು ವಾಪಸ್ ಪಡೆಯಲು ಹಾಗೂ ಹಾಸ್ಟೆಲ್ ಅನ್ನು ತಪಾಸಣೆ ನಡೆಸದಿರಲು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಮುನಿರಾಜು ಅವರನ್ನು ಒಪ್ಪಿಸುವುದಾಗಿ ಹೇಳಿದ ದ್ವಿತೀಯ ದರ್ಜೆ ಗುಮಾಸ್ತ (ಎಸ್ಡಿಎ) ಶಿವಣ್ಣ ಅವರು ಒಟ್ಟು 1.5 ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಮೊದಲೇ 50 ಸಾವಿರ ರೂ ಹಣವನ್ನು ರಾಜಯ್ಯ ನೀಡಿದ್ದರು. ಆದರೂ ಬಾಕಿ ಒಂದು ಲಕ್ಷ ಹಣ ನೀಡಲೇ ಬೇಕು ಎಂದು ಶಿವಣ್ಣ ಹಠ ಹಿಡಿದಾಗಿ ರಾಜಯ್ಯ ಎಸಿಬಿಯ ಮೊರೆ ಹೋದರು. ನಂತರ ಬಾಕಿ ಉಳಿದ ಒಂದು ಲಕ್ಷ ರೂ. ಹಣವನ್ನು ಪಡುವಾರಹಳ್ಳಿ ವೃತ್ತದಲ್ಲಿ ತೆಗೆದುಕೊಳ್ಳುವಾಗ ಶಿವಣ್ಣ ಅವರ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.