ಹೈದರಾಬಾದ್: ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಮತ್ತೊಂದು ಘಟನೆ ತೆಲಂಗಾಣದ ಮಹಬೂಬಾಬಾದ್ ನಲ್ಲಿ ಶುಕ್ರವಾರ ( ಫೆ.10 ರಂದು) ಸಂಜೆ ನಡೆದಿದೆ.
ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ಕಿಟಕಿಯೊಂದಕ್ಕೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ವೈಜಾಗ್ ತಲುಪಿದ ಬಳಿಕ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂದು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಸಿಪಿಆರ್ಒ ರಾಕೇಶ್ ತಿಳಿಸಿದ್ದಾರೆ.
ಕಳೆದ ತಿಂಗಳು ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಾರಂಭಿಸುವ ಮೊದಲು, ವಿಶಾಖಪಟ್ಟಣಂನ ರೈಲ್ವೆ ಯಾರ್ಡ್ನಲ್ಲಿ ಅಪರಿಚಿತ ವ್ಯಕ್ತಿಗಳು ರೈಲಿನ ಕೋಚ್ಗೆ ಕಲ್ಲು ತೂರಾಟ ನಡೆಸಿದ್ದರು, ಗಾಜಿನ ಕಿಟಕಿಯನ್ನು ಒಡೆದಿದ್ದರು.
ಇದೀಗ ಮತ್ತೊಂದು ಸಲಿ ರೈಲಿಗೆ ಹಾನಿ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada