56 ವರ್ಷದ ಪ್ರಾಯದ ಮಲ್ಲಿಕಾರ್ಜುನ ಗುಬ್ಬಿ ಇಂಡಿಯನ್ ರಿಸರ್ವ್ ಬಾಟಲಿಯನ್ ಮುನಿರಾಬಾದ್ ಕೊಪ್ಪಳದಲ್ಲಿ ಕಾರ್ಯ ಮಿರ್ವಹಿಒಸುತ್ತಿದ್ದ ಇವರು ಕಳೆದ ಆರು ತಿಂಗಳ ಹಿಂದೆ ಎಎರ್ ಎಸ್ ಐ ಆಗಿ ಪದೋನ್ನತಿ ಪಡೆದಿದ್ದರು. ಕೊಪ್ಪಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ಮೇ 16ರಂದು ಉಡುಪಿ ಜಿಲ್ಲೆಯ ಅಮಾಸೆಬೈಲು ಪೊಲೀಸ್ ಠಾಣೆಗೆ ವರ್ಗವಾಗಿ ಕರ್ತವ್ಯ ಆರಂಭಿಸಿದ್ದರು. ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಠಾಣೆಯ ಹತ್ತಿರವಿರುವ ಮರವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುದ್ದಾರೆ, ಕೆಲಸದೊತ್ತಡವೇ ಇವರ ಸಾವಿಗೆ ಕಾರಣ ಎನ್ನಲಾಗಿದೆ.