ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳದಲ್ಲಿ ಜನ್ ಸಂವಾದ್ ರ್ಚುವಲ್ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ಕರ್ಯರ್ತರೊಂದಿಗೆ ಶಾ ಮಾತನಾಡಿ, ಬಂಗಾಳದ ಸಮಗ್ರ ಬದಲಾವಣೆಗೆ ರಾಜ್ಯದ ಜನ ಸಿದ್ಧಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತದಾರ ಬಿಜೆಪಿಯನ್ನು ಗೆಲ್ಲಿಸಲಿದ್ದಾನೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾರ್ಜಿ ನೇತೃತ್ವದ ರಾಜ್ಯ ರ್ಕಾರ ಅಭಿವೃದ್ಧಿಯನ್ನು ಕಡೆಗಣಿಸಿದ್ದು, ಕೇವಲ ಕೇಂದ್ರ ರ್ಕಾರದೊಂದಿಗೆ ಜಗಳ ಕಾಯುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಹರಿಹಾಯ್ದರು. ಕಿಸಾನ್ ಸಮ್ಮಾನ್ ಯೋಜನಯಡಿ ರಾಜ್ಯದ ರೈತರಿಗೆ ಬರಬೇಕಾದ ೬,೦೦೦ ರೂ. ಇನ್ನೂ ಕೇಂದ್ರದ ಬಳಿಯೇ ಉಳಿಯಲು ಮಮತಾ ಬ್ಯಾರ್ಜಿ ರ್ಕಾರದ ಉದಾಸೀನವೇ ಕಾರಣ ಎಂದು ಅಮಿತ್ ಶಾ ಈ ವೇಳೆ ಆರೋಪಿಸಿದರು.
ಬದಲಾವಣೆಗೆ ಮುನ್ನುಡಿ ಬರೆಯಲಿದೆ ಬಂಗಾಳ/ ವರ್ಚುವಲ್ ರ್ಯಾಲಿಯಲ್ಲಿ ಅಮಿತ್ ಶಾ ಅಭಿಮತ
Please follow and like us: