ಪಟ್ಟಣದಲ್ಲಿ ಶ್ರೀರಾಮ ಸೇನೆಯ ಸಂಘಟನೆಯ ವತಿಯಿಂದ ಗುರುವಾರ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ನಿಮಿತ್ತ ಹಿಂದೂ ಸಂತ ಸಮಾವೇಶ ನಡೆಯಿತು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ಹಿಂದೂ ಮಹಿಳೆಯರ ರಕ್ಷಣೆಗೆ ಪ್ರತಿಯೊಬ್ಬ ಹಿಂದು ಸಹ ನಮ್ಮಮನೆಗಳಲ್ಲಿ ಎಲ್ಲರಿಗೂ ಕಾಣಿಸುವ ರೀತಿ ತಲ ವಾರ ಇಟ್ಟುಕೊಳ್ಳಿ ಒಂದು ತಲವಾರ್ ಇಟ್ಟುಕೊಡರೆ ಒಂದು ಎಫ್ ಐಆರ್ ಹಾಕುವುದಿಲ್ಲ, ಆ ಯುಧ ಪೂಜೆ ದಿನದಂದು ಖಡ್ಗ, ಭರ್ಚಿ, ಪೊಲೀಸ್ ಠಾಣೆಯಲ್ಲಿ ಪೊಲೀಸರು ಬಂದೂಕಿನ ಪೂಜೆ ಯಾವ ರೀತಿ ಸಲ್ಲಿಸುತ್ತಾರೆ ಅದೇ ರೀತಿಯಾಗಿ ಹಿಂದೂಗಳ ಮನೆಯಲ್ಲಿ ಮಾಡಬೇಕು ಎಂದರು. ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಯಾವುದೇ ಒಂದು ಒಂದು ಸಮಾವೇಶ ನಡೆಸಿದರೆ, ಕೆಲವು ದೇಶದ್ರೋಹಿ ಮುಸಲ್ಮಾನರು ಸುಮ್ಮಸುಮ್ಮನೇ ಅಪಪ್ರಚಾರ ಮಾಡುತ್ತಾರೆ. ಅದಕ್ಕೆ ಸಾಥ್ ನೀಡುತ್ತಿರುವ ತಾಲೂಕಿನ ಶಾಸಕ ಅಜಯಸಿಂಗ್ ಕೋಮುವಾದಿಗಳು. ನಮ್ಮ ತಾಲೂಕು ಭಾವೈಕ್ಯತೆಯ ತಾಲೂಕು ಅಂತಿರಲ್ಲಾ ಈ ಹಿಂದೆ ನಮ್ಮ ಮಾಜಿ ಅಧ್ಯಕ್ಷ ಶರಣು ಕೋಳಕೂರ ಅವರ ಮನೆಯ ಮೇಲೆ ಮುಸ್ಲಿಮರು ಹಲ್ಲೆ ಮಾಡಿದಾಗ ಸೌಜನ್ಯಕ್ಕೂ ಸಹ ಭೇಟಿ ಕೊಡಲಿಲ್ಲ, ಅವರಿಗೆ ಪ್ರಚೋದನೆ ನೀಡಿದವರೆ ನೀವು ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತಿರಾ? ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಮಲ್ಲಿನಾಥ ಗೌಡ ಪಾಟೀಲ್ ಯಲಗೋಡ ಕಾರ್ಯಕ್ರಮ ಉದ್ಘಾ ಟಿಸಿದರು, ಚೈತ್ರಾ ಕುಂದಾಪುರ, ಡಾ. ವಿಶ್ವರಾದ್ಯ ಶೀವಾಚಾರ್ಯರು, ಡಾ. ಶಿವಾನಂದ ಸ್ವಾಮೀಜಿ ಸೊನ್ನ ರುದ್ರಮುಶಿವಾಚಾರ್ಯರು, ಶಿವಾಚಾರ್ಯರು, ಚನ್ನಮಲ್ಲ ಮಹಾಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ದೊಡ್ಡಪ್ಪಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿಗಿ, ದಂಡಪ್ಪ ಸಾಹು ರೇವಣಸಿದ್ದಪ್ಪ ಸಂಕಾಲಿ, ಸಿದ್ದು ನಾಯಿಕೋಡಿ ಮಡಿವಾಳಪ್ಪ ತಳವಾರ, , ಪಿಂಟು ಕಡಕೋಳ, , ಇದ್ದರು. 6000ಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.
https://play.google.com/store/apps/details?id=com.speed.newskannada