ಬಾಲ್ಯವಿವಾಹ ಪ್ರಕರಣ ದಾಖಲು

ಮೈಸೂರು: ಕೊರೊನಾ ಸೋಕು ಹರಡುವ ಹಿನ್ನಲೆಯಲ್ಲಿ ಲಾಕ್‌ಡೌನ್ ಜಾರಿ ಮಾಡಲಾದೆ. ಈ ಮಧ್ಯೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದ ಹೊರವಲಯದ ದೇವಾಲಯವೊಂದರಲ್ಲಿ ಬಾಲ್ಯವಿವಾಹ ನಡೆದಿರುವ ಕುರಿತು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕವಿತಾ ಅವರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಬಾಲ್ಯ ವಿವಾಹಕ್ಕೊಳಗಾಗಿದ್ದ ಬಾಲಕಿಯನ್ನು ರಕ್ಷಿಸಿ ಪಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಮಲ್ಲೇಶ ನಾಯಕ ಎಂಬುವವರ ಪುತ್ರ ರವಿಕುಮಾರ್ (೨೪) ಎಂಬಾತನಿಗೆ ೧೭ ವರ್ಷ ವಯಸ್ಸಿನ ಯುವತಿಯ ಜೊತೆ ಏ.೧೯ ರಂದು ಹಲ್ಲರೆ ಗ್ರಾಮದ ಎತ್ತಮ್ಮನ ದೇವಸ್ಥಾನದಲ್ಲಿ ಅರ್ಚಕರ ಸಮ್ಮುಖದಲ್ಲಿ ಬಾಲ್ಯವಿವಾಹ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕವಿತಾ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲ್ಯವಿವಾಹಕ್ಕೊಳಗಾಗಿದ್ದ ಯುವತಿಯನ್ನು ರಕ್ಷಿಸಿ ರವಿಕುಮಾರ್ ಹಾಗೂ ದೇವಸ್ಥಾನದ ಅರ್ಚಕ ಸೇರಿ ಇತರರ ಪತ್ತೆಗೆ ಮುಂದಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನಾಗರಿಕ ವಿಮಾನಯಾನಕ್ಕೂ ಕಾಲಿಟ್ಟ ಕೊರೊನಾ

Wed Apr 22 , 2020
ನವದೆಹಲಿ: ಕೊರೊನಾ ತೀವ್ರವಾಗಿ ಹರಡುತ್ತಿದ್ದು, ನಾಗರಿಕ ವಿಮಾನಯಾನ ಸಚಿವಾಲಯಕ್ಕೂ ಕಾಲಿಟ್ಟಿದೆ. ಹೌದು ಏ. ೨೦ ರಂದು ಉದ್ಯೋಗಕ್ಕೆ ಹಾಜರಾದ ಸಚಿವಾಲಯದ ಉದ್ಯೋಗಿಯೊಬ್ಬರಲ್ಲಿ ಕೋವಿಡ್ ಪತ್ತೆಯಾಗಿರುವುದರಿಂದ ದೆಹಲಿಯ ಜೋರ್ ಬಾಗ್‌ನ ರಾಜೀವ್ ಗಾಂಧಿ ಭವನ ಸಚಿವಾಲಯದ ಪ್ರಧಾನ ಕಚೇರಿಯನ್ನು ಪ್ರೋಟೋಕಾಲ್ ಮೂಲಕ ಮೊಹರು ಮಾಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ. ಸಂಪರ್ಕಕ್ಕೆ ಬಂದ ಎಲ್ಲ ಸಹೊದ್ಯೋಗಿಗಳನ್ನು ಮುನ್ನಚ್ಚರಿಕೆಯಾಗಿ ಸ್ವಯಂ-ಪ್ರತ್ಯೇಕತೆಗೆ ಕಳಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ […]

Advertisement

Wordpress Social Share Plugin powered by Ultimatelysocial