ಪಾಕಿಸ್ಥಾನದಿಂದ ದಂಡೆತ್ತಿ ಬಂದಿರುವ ಮಿಡತೆಗಳ ಹಿಂಡು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ, ಹಾಗೆ ದಿನೇ ದಿನೆ ಒಂದೊಂದೇ ರಾಜ್ಯ ಪ್ರವೇಶಿಸುತ್ತಿರುವ ಮಿಡತೆಗಳು ಪ್ರಸ್ತುತ ಏಳು ರಾಜ್ಯಗಳಲ್ಲಿ ತನ್ನ ಹಾವಳಿ ಆರಂಭಿಸಿದೆ. 20 ಜಿಲ್ಲೆಗಳ 303 ಪ್ರದೇಶಗಳಲ್ಲಿ ಒಟ್ಟು 47,000 ಹೆಕ್ಟೇರ್ ಪ್ರಮಾಣದ ಕೃಷಿ ಭೂಮಿಯಲ್ಲಿನ ಬೆಳೆಗೆ ಮಿಡತೆಗಳು ಮುತ್ತಿಗೆ ಹಾಕಿದೆ. ಪರಿಸ್ಥಿತಿಯ ಗಂಭೀರತೆ ತಿಳಿದ ಕೇಂದ್ರ ಸರ್ಕಾರ ಕೀಟಗಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಹರ್ಯಾಣ ರಾಜ್ಯಗಳಲ್ಲಿದ್ದ ಮಿಡತೆಗಳು ಗುರುವಾರ ಬೆಳಗಾಗುವ ವೇಳೆಗೆ ಉತ್ತರಪ್ರದೇಶ ಮತ್ತು ಪಂಜಾಬ್ ಗಡಿಯನ್ನೂ ಪ್ರವೇಶಿಸಿವೆ. ಈ ಹಿನ್ನೆಲೆಯಲ್ಲಿ ಪಂಜಾಬ್ನಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.