ಲಾಕ್ಡೌನ್ ಹಿನ್ನಲೆ ಮದ್ಯ ಸಿಗುತ್ತಿಲ್ಲ. ಆದ್ರೆ ಜನರಿಗೆ ಕುಡಿಯುವ ಚಪಲ ಒಂದು ಕೊಲೆಯನ್ನು ಮಾಡುವ ಹಂತಕ್ಕೆ ಕರೆದುಕೊಂಡು ಹೋಗಿತ್ತು. ಹೌದು ರೌಡಿಶೀಟರ್ ಪ್ರಕಾಶ್ ಅಲಿಯಾಸ್ ಲೂಸ್ ಎಂಬುವವನ ಕೊಲೆಗೆ ಸಂಬಂಧಿಸಿದAತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕಾಶ್ನ ಬಳಿ ಮದ್ಯ ಕೊಡುವಂತೆ ಲೊಕೇಶ್ ಜಗಳವಾಡಿದ್ದ ಪ್ರಕಾಶ್ ಇಲ್ಲ ಎಂದಿದ್ದಕ್ಕೆ ಸ್ನೇಹಿತರು ಕಾಡ್ಸ್ ಆಡುವ ನೆಪದಲ್ಲಿ ಆತನನ್ನು ಕರೆಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಈ ಕೊಲೆಯ ಬಗ್ಗೆ ಪರಿಶೀಲನೆ ನಡೆಸಿ ಲೊಕೇಶ್, ನಿಖಿಲ್ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಪ್ರಕಾಶ್ ಕೊಲೆ
Please follow and like us: