ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ:ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಘೋಷ

ಚಂಡಿಗಡ: ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುವುದು ಮತ್ತು ಮುಂದಿನ 10 ದಿನಗಳಲ್ಲಿ ಜಮೀನು ಅಡಮಾನವನ್ನೂ ಮನ್ನಾ ಮಾಡಲಾಗುವುದು ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಶುಕ್ರವಾರ ಘೋಷಿಸಿದ್ದಾರೆ.

” 2 ಲಕ್ಷ ರೂ.ವರೆಗಿನ ಸಾಲ ಹೊಂದಿರುವ ರೈತರ ಸಾಲವನ್ನು ಮನ್ನಾ ಮಾಡಲು ಪಂಜಾಬ್ ಸರಕಾರ ನಿರ್ಧರಿಸಿದೆ.

ಭೂಮಿಯ ಅಡಮಾನವನ್ನು ಸಹ ಮನ್ನಾ ಮಾಡಲಾಗುತ್ತದೆ. ಮುಂದಿನ 10-15 ದಿನಗಳಲ್ಲಿ ರೈತರ ಖಾತೆಗಳಿಗೆ ಮೊತ್ತವನ್ನು ಜಮಾ ಮಾಡಲಾಗುವುದು. ರೈತರಿಗಾಗಿ . 2,000 ರೂ. ಕೋಟಿ ಮೀಸಲಿಡಲಾಗಿದೆ ಎಂದು ಚರಣ್ ಜಿತ್ ಸಿಂಗ್ ಚನ್ನಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭೂರಹಿತ ಕೂಲಿ ಕಾರ್ಮಿಕರಿಗೂ ಸಾಲ ಮನ್ನಾ ಆಗಲಿದ್ದು, ಪರಿಶಿಷ್ಟ ಜಾತಿಗೆ ಸೇರಿದವರು ಪಡೆದಿರುವ ಸಾಲವನ್ನೂ ಮನ್ನಾ ಮಾಡಲಾಗುವುದು ಎಂದು ಚರಣ್ ಜಿತ್ ಸಿಂಗ್ ಚನ್ನಿ ತಿಳಿಸಿದ್ದಾರೆ.

ರೈತರ ಬಾಕಿ ಉಳಿದಿರುವ ಎಲ್ಲಾ ಸಾಲವನ್ನು ಮನ್ನಾ ಮಾಡುವ ವಿಚಾರವನ್ನು ರಾಜ್ಯ ಸಚಿವ ಸಂಪುಟವು ಪರಿಗಣಿಸುತ್ತಿದೆ ಎಂದು ಅವರು ಹೇಳಿದರು.

ಪಂಜಾಬಿ ಚಲನಚಿತ್ರಗಳು ಹಾಗೂ ಸಂಗೀತ ಉದ್ಯಮಕ್ಕೆ ಸಂಬಂಧಿಸಿದವರನ್ನು ಪ್ರೋತ್ಸಾಹಿಸಲು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಚರಣ್ ಜಿತ್ ಸಿಂಗ್ ಚನ್ನಿ ಪ್ರಸ್ತಾಪಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಜಯ್ ರಾವ್ & ಗುರುದೇಶ್ ಅಸಮಾಧಾನ: ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ..?

Fri Dec 24 , 2021
ಬೆಂಗಳೂರು: ಅಜಯ್ ರಾವ್ & ಗುರುದೇಶ್ ಪಾಂಡೆ ಅಸಮಾಧಾನ ಬಗ್ಗೆ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಅಜಯ್ ರಾವ್ & ಗುರುದೇಶ್ ಪಾಂಡೆ ಅವರು ಸಿನಿಮಾದ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರು. ಇದಕ್ಕೆ ಬೆಂಗಳೂರಿನಲ್ಲಿ ನಟಿ ರಚಿತಾ ರಾಮ್ ಸ್ಪಷ್ಟನೆ ಕೊಟ್ಟಿದ್ದು, ಪ್ರತಿ ವಿಚಾರವೂ ಗೊತ್ತಿದೆ. ನನಗೆ ಗೊತ್ತಿಲ್ಲ ಎಂದು ಹೇಳಿದರೆ ಅದು ತಪ್ಪಾಗುತ್ತದೆ. ಇದು ಪಬ್ಲಿಸಿಟಿ ಗಿಮಿಕ್​ ಅಲ್ಲ. ಇದು ವೈಯಕ್ತಿಕ […]

Advertisement

Wordpress Social Share Plugin powered by Ultimatelysocial