ಕಾಲಿವುಡ್ನಲ್ಲಿ ಮಕ್ಕಳ್ ಸೆಲ್ವನ್ ಎಂದೇ ಕರೆಸಿಕೊಂಡಿರುವ ನಟ ವಿಜಯ್ ಸೇತುಪತಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಖಾಸಗಿ ಕಾರ್ಯಕ್ರಮದ ಟಿವಿ ಶೋನಲ್ಲಿ ಮಾತನಾಡಿದ ವಿಜಯ್ ಸೇತುಪತಿ ದೇವಾಲಯದಲ್ಲಿ ವಿಗ್ರಹಗಳಿಗೆ ಸ್ನಾನ ಮಾಡುವುದನ್ನು ತೋರಿಸುತ್ತಾರೆ, ಬಟ್ಟೆ ಹಾಕುವಾಗ ಮಾತ್ರ ಪುರೋಹಿತರು ಬಾಗಿಲು ಹಾಕುತ್ತಾರೆ. ಅಲಂಕಾರ ಮಾಡುವಾಗ ತೋರಿಸಲ್ಲ ಯಾಕೆ ಎಂಬ ಮಾತನ್ನು ಆಡಿರುವುದು ತೀವ್ರ ವಿವಾದಕ್ಕೆ ಗುರಿಮಾಡಿದೆ. ವಿಜಯ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಅಖಿಲ ಭಾರತ ಹಿಂದೂ ಮಹಾ ಸಭಾ, ಹಿಂದೂ ದೇವಾಲಯಗಳಲ್ಲಿ ಆಗಮಶಾಸ್ತçದ ಪ್ರಕಾರ ಕೈಂಕರ್ಯಗಳನ್ನು ಮಾಡಲಾಗುತ್ತದೆ. ಇದನ್ನು ಅಪಮಾನ ಮಾಡಿ ಮಾತನಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ವಿರುದ್ಧ ನೆಟ್ಟಿಗರು ಕೂಡ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.
ವಿವಾದಕ್ಕೀಡಾದ ನಟ ವಿಜಯ್ ಸೇತುಪತಿ
Please follow and like us: