ವಿವಾದಕ್ಕೀಡಾದ ನಟ ವಿಜಯ್ ಸೇತುಪತಿ

ಕಾಲಿವುಡ್‌ನಲ್ಲಿ ಮಕ್ಕಳ್ ಸೆಲ್ವನ್ ಎಂದೇ ಕರೆಸಿಕೊಂಡಿರುವ ನಟ ವಿಜಯ್ ಸೇತುಪತಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಖಾಸಗಿ ಕಾರ್ಯಕ್ರಮದ ಟಿವಿ ಶೋನಲ್ಲಿ ಮಾತನಾಡಿದ ವಿಜಯ್ ಸೇತುಪತಿ ದೇವಾಲಯದಲ್ಲಿ ವಿಗ್ರಹಗಳಿಗೆ ಸ್ನಾನ ಮಾಡುವುದನ್ನು ತೋರಿಸುತ್ತಾರೆ, ಬಟ್ಟೆ ಹಾಕುವಾಗ ಮಾತ್ರ ಪುರೋಹಿತರು ಬಾಗಿಲು ಹಾಕುತ್ತಾರೆ. ಅಲಂಕಾರ ಮಾಡುವಾಗ ತೋರಿಸಲ್ಲ ಯಾಕೆ ಎಂಬ ಮಾತನ್ನು ಆಡಿರುವುದು ತೀವ್ರ ವಿವಾದಕ್ಕೆ ಗುರಿಮಾಡಿದೆ. ವಿಜಯ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಅಖಿಲ ಭಾರತ ಹಿಂದೂ ಮಹಾ ಸಭಾ, ಹಿಂದೂ ದೇವಾಲಯಗಳಲ್ಲಿ ಆಗಮಶಾಸ್ತçದ ಪ್ರಕಾರ ಕೈಂಕರ್ಯಗಳನ್ನು ಮಾಡಲಾಗುತ್ತದೆ. ಇದನ್ನು ಅಪಮಾನ ಮಾಡಿ ಮಾತನಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ವಿರುದ್ಧ ನೆಟ್ಟಿಗರು ಕೂಡ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಒಂದು ಲಕ್ಷ ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ

Sat May 9 , 2020
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೊರೋನಾ ಸೋಂಕಿತರ ಪತ್ತೆಗಾಗಿ ಪರೀಕ್ಷೆ ಕೂಡ ಅಷ್ಟೇ ತ್ವರಿತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಇದುವರೆಗೆ ಒಂದು ಲಕ್ಷ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವ ಸುಧಕಾರ್ ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿರುವ 60 ಲ್ಯಾಬ್ ಗಳಿಂದ 10 ಸಾವಿರ ಪರೀಕ್ಷೆಯನ್ನು ಪ್ರತಿ ದಿನ ನಡೆಸುವ ಸಾಮರ್ಥ್ಯ ಬರಲಿದೆ.     ಕರ್ನಾಟಕ 1 ಲಕ್ಷ […]

Advertisement

Wordpress Social Share Plugin powered by Ultimatelysocial