ಉದ್ಘಾಟನೆಗೂ ಮೊದಲೆ ಬಿರುಕು ಬಿಟ್ಟ ಶಾಲಾ ಕಟ್ಟಡದ ಬಗ್ಗೆ ಸಾರ್ವಜನಿಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿಡೀರ್ ಭೆಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಶ್ರೀಮಂತ ಪಾಟೀಲ ಗುತ್ತಿಗೆದಾರನಿಗೆ ಆವಾಜ್ ಹಾಕಿದ್ದಾರೆ.ಸ್ಥಳದಲ್ಲೇ ಪೋನ್ ಮಾಡುವ ಮೂಲಕ ಭ್ರಷ್ಟಾಚಾರ ನಡೆಸಿ ಕಳಪೆ ಕಾಮಗಾರಿ ಮಾಡಿ ಮತ್ತೊಬ್ಬರ ಜೀವಹಾನಿಗೆ ಕಾರಣವಾದರೆ ನಾನು ಸುಮ್ಮನೆ ಇರಲ್ಲ ನೀವು ಮಾಡಿರುವ ಕೆಲಸ ಕಳಪೆ ಗುಣಮಟ್ಟದಿಂದ ಕೂಡಿದೆ ಅದಕ್ಕೆ ಕಟ್ಟಡ ಮರುನಿರ್ಮಾಣ ಮಾಡಿ ಅಂತ ಎಚ್ಚರಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ನಬಾರ್ಡ ಯೋಜನೆ ಅಡಿಯಲ್ಲಿ ಗುತ್ತಿಗೆದಾರ ಸಂಗಮೇಶ ಪಾಟೀಲ ಎಂಬುವರು ಹದಿನೇಳು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಪ್ರೌಢ ಶಾಲಾ ಕೊಠಡಿ ಇದಾಗಿದ್ದು ಸದ್ಯ ಕಟ್ಟಡವನ್ನು ಕೆಡವಿ ಮರುನಿರ್ಮಾಣ ಮಾಡುವಂತೆ ಶಾಸಕ ಶ್ರೀಮಂತ ಪಾಟೀಲ ಆದೇಶಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada