ಅಮೂಲ್ಯ ‘ಅವಳಿ’ ಮಕ್ಕಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮ,

ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಅವಳಿ ಮಕ್ಕಳ ಮೊದಲನೇ ವರ್ಷದ ಹುಟ್ಟುಹಬ್ಬ ಇವತ್ತು.

ಆ ಖುಷಿಯನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ನಟಿ ಅಮೂಲ್ಯ ಅವರು ತಮ್ಮ ಅವಳಿ ಗಂಡು ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರು ಇಟ್ಟಿದ್ದಾರೆ. ಅ ಅಕ್ಷರದಿಂದಲೇ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.ನೀವಿಬ್ಬರೂ ನನ್ನ ಸಂಪೂರ್ಣ ಹೃದಯವನ್ನು ಆವರಿಸಿದ್ದೀರಿ. ನಿಮ್ಮಿಬ್ಬರೊಂದಿಗೆ ಜೀವನವು ಇನ್ನೂ ಹೆಚ್ಚು ಸುಂದರವಾಗಿದೆ. ನನ್ನ ಸಂತೋಷವೇ ನೀವು ಎಂದು ಅಮೂಲ್ಯ ಮಕ್ಕಳಿಗೆ ವಿಶ್ ಮಾಡಿದ್ದಾರೆ.

ಅಮೂಲ್ಯ ಮಕ್ಕಳಿಗೆ ಹಲವಾರು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿಮ್ಮ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಆಶೀರ್ವಾದ ಮಾಡಿದ್ದಾರೆ.ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದಾರೆ. ಮುದ್ದು ಮಕ್ಕಳನ್ನು ಸಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯನ್ನು ಹಂಚಿಕೊಳ್ತಾರೆ.ಮಾತೃತ್ವವು ಪವಾಡಕ್ಕಿಂತ ಏನೂ ಕಮ್ಮಿ ಇಲ್ಲ. ಲೆಕ್ಕವಿಲ್ಲದಷ್ಟು ನಿದ್ದೆಯಿಲ್ಲದ ರಾತ್ರಿಗಳು, ಗಂಟೆಗಟ್ಟಲೆ ಒಟ್ಟಿಗೆ ಮಕ್ಕಳು ಅಳುವುದು. ಪ್ರತಿ 2 ಗಂಟೆಗಳಿಗೊಮ್ಮೆ ಆಹಾರವನ್ನು ನೀಡುವುದು. ಹುಚ್ಚುತನ, ಹಸಿವು, ಕೋಪ, ಕಿರಿಕಿರಿಯನ್ನು ನಾನು ನಿಮಗೆ ಹೇಳಬೇಕು.

ಆದ್ರೆ ಆ ಎಲ್ಲಾ ನೋವು ಮಕ್ಕಳು ಮುಗುಳು ನಕ್ಕಾಗ ಮಯಾವಾಗುತ್ತೆ ಎಂದು ಅಮೂಲ್ಯ ಹೇಳಿದ್ದರು.ಚೆಲುವಿನ ಚಿತ್ತಾರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮೋಡಿ ಮಾಡಿದ್ದ ಐಶು ಅಂದ್ರೆ ಅಮೂಲ್ಯ ಅವರು ಮಕ್ಕಳೊಂದಿಗೆ ಎಂಜಾಯ್ ಮಾಡ್ತಾ ಇದ್ದಾರೆ.ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕೆಂದು ಅಭಿಮಾನಿಗಳ ಆಸೆ. ಮಕ್ಕಳಿಗೆ ಒಂದು ವರ್ಷ ಆಯ್ತು ಅಲ್ವಾ? ಇನ್ಮೇಲೆ ಸಿನಿಮಾ ಮಾಡ್ತಾರಾ ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಬಕಾರಿ ಇಲಾಖೆಯಲ್ಲಿ ೧೦೦ ಕೋಟಿ ಅವ್ಯವಹಾರ.

Wed Mar 1 , 2023
  ರಾಜ್ಯದ ಅಬಕಾರಿ ಇಲಾಖೆಯಲ್ಲಿ ೨೦೦ ಕೋಟಿ ರೂ. ಅವ್ಯವಹಾರ ನಡೆದಿದ್ದು, ಇದರಲ್ಲಿ ೮೦ ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಕೆಪಿಸಿಸಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕಖರ್ಗೆ ಹಾಗೂ ವಕ್ತಾರ ರಮೇಶ್‌ಬಾಬು, ಅಬಕಾರಿ ಇಲಾಖೆಯಲ್ಲಿ ಕಾಕಂಬಿ ರಫ್ತು ಹಾಗೂ ಮೊಲಾಸಿಸ್‌ಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದ್ದು, ಅನರ್ಹ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ ನೀಡಲಾಗಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ೮೦ […]

Advertisement

Wordpress Social Share Plugin powered by Ultimatelysocial