ಕಾರ್ಯಕರ್ತರ ಮೇಲೆ ಪೊಲೀಸರು ಗರಂ

ಜೆಡಿಯು ಕಾರ್ಯಕರ್ತರ ಮೇಲೆ ಪೊಲೀಸರು ಗರಂ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಷಿಯಲ್ ಡಿಸ್ಟೇನ್ಸ್ ಇಲ್ಲದೆ ಅನುಮತಿ ಪಡೆಯದೇ ಕಾರ್ಯಕರ್ತರು ರ‍್ಯಾಲಿ ಮೂಲಕ ಬಂದ ಹಿನ್ನೆಲೆಯಲ್ಲಿ ನಾಲ್ವರನ್ನು ಮಾತ್ರ ಸಿಎಂ ಬಿಎಸ್‌ವೈ ಭೇಟಿಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ಖಾಸಗಿ ಶಿಕ್ಷಕರಿಗೆ ಅನುದಾನ ಕೊಡುವಂತೆ ಜೆಡಿಯು ಕಾರ್ಯಕರ್ತರು ಸಿಎಂ ಬಳಿ ಮನವಿಮಾಡಿಕೊಂಡರು. ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲಿಸಿದರು. ಇನ್ನೂ ರ‍್ಯಾಲಿ ಮಾಡುವ ಮೂಲಕ ಪೊಲೀಸರಿಗೆ ಟೆನ್ಷನ್ ಜೆಡಿಯು ಕಾರ್ಯಕರ್ತರು ಕೊಟ್ಟರು. ಯಾವುದೇ ಅನುಮತಿ ಇಲ್ಲದೆ ಸಿಎಂ ಕಚೇರಿ ಬಳಿ ಗುಂಪಾಗಿ ಬಂದರು. ಜೆಡಿಯು ರಾಜ್ಯಾಧ್ಯಕ್ಷ ಮಹೀಮಾ ಪಾಟೀಲ್ ನೇತೃತ್ವದಲಿ ಕಾರ್ಯಕರ್ತರು ಬಂದಿದ್ದು, ಸಿಎಂ ಕಚೇರಿಗೆ ಹೆಚ್ಚು ಭದ್ರತೆ ಪೊಲೀಸರು ಒದಗಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಗಾಳಿಯಿಂದಲೂ ಹರಡುತ್ತೆ ಕೊರೊನಾ

Mon Jul 6 , 2020
ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದೆ. ಆದರೆ ಇದೀಗ ಗಾಳಿಯಿಂದಲೂ ವೈರಸ್ ಹರಡುತ್ತದೆ ಎಂಬ ಭಯಾನಕ ಮಾಹಿತಿಯನ್ನು ವಿಜ್ಞಾನಿಗಳು ಹೊರ ಹಾಕಿದ್ದಾರೆ. ಇಷ್ಟು ದಿನ ಕೊರೋನಾ ವೈರಸ್ ಸೋಂಕಿತ ವ್ಯಕ್ತಿಯ ಸೀನುವಿಕೆಯಿಂದ ಬರುವ ಡ್ರಾಪ್ ಲೆಟ್ಸ್, ಸ್ಪರ್ಶ ಮತ್ತು ಆತ ಮುಟ್ಟಿದ ವಸ್ತುಗಳಿಂದ ಹರಡುತ್ತದೆ ಎಂದೇ ತಿಳಿಯಲಾಗಿತ್ತು. ಆದರೆ ಇದೀಗ ಜಗತ್ತಿನ ಸುಮಾರು 239 ವಿಜ್ಞಾನಿಗಳು ಕೊರೋನಾ ವೈರಸ್ ಗಾಳಿಯಿಂದಲೂ ಹರಡುತ್ತದೆ ಎಂಬ ಸ್ಫೋಟಕ […]

Advertisement

Wordpress Social Share Plugin powered by Ultimatelysocial