ಜೆಡಿಯು ಕಾರ್ಯಕರ್ತರ ಮೇಲೆ ಪೊಲೀಸರು ಗರಂ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸೋಷಿಯಲ್ ಡಿಸ್ಟೇನ್ಸ್ ಇಲ್ಲದೆ ಅನುಮತಿ ಪಡೆಯದೇ ಕಾರ್ಯಕರ್ತರು ರ್ಯಾಲಿ ಮೂಲಕ ಬಂದ ಹಿನ್ನೆಲೆಯಲ್ಲಿ ನಾಲ್ವರನ್ನು ಮಾತ್ರ ಸಿಎಂ ಬಿಎಸ್ವೈ ಭೇಟಿಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ಖಾಸಗಿ ಶಿಕ್ಷಕರಿಗೆ ಅನುದಾನ ಕೊಡುವಂತೆ ಜೆಡಿಯು ಕಾರ್ಯಕರ್ತರು ಸಿಎಂ ಬಳಿ ಮನವಿಮಾಡಿಕೊಂಡರು. ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲಿಸಿದರು. ಇನ್ನೂ ರ್ಯಾಲಿ ಮಾಡುವ ಮೂಲಕ ಪೊಲೀಸರಿಗೆ ಟೆನ್ಷನ್ ಜೆಡಿಯು ಕಾರ್ಯಕರ್ತರು ಕೊಟ್ಟರು. ಯಾವುದೇ ಅನುಮತಿ ಇಲ್ಲದೆ ಸಿಎಂ ಕಚೇರಿ ಬಳಿ ಗುಂಪಾಗಿ ಬಂದರು. ಜೆಡಿಯು ರಾಜ್ಯಾಧ್ಯಕ್ಷ ಮಹೀಮಾ ಪಾಟೀಲ್ ನೇತೃತ್ವದಲಿ ಕಾರ್ಯಕರ್ತರು ಬಂದಿದ್ದು, ಸಿಎಂ ಕಚೇರಿಗೆ ಹೆಚ್ಚು ಭದ್ರತೆ ಪೊಲೀಸರು ಒದಗಿಸಿದರು.
ಕಾರ್ಯಕರ್ತರ ಮೇಲೆ ಪೊಲೀಸರು ಗರಂ
Please follow and like us: