ರಂಜಾನ್ ಹಬ್ಬ ಮನುಷ್ಯನಲ್ಲಿ ಸತ್ಯ, ನ್ಯಾಯ, ನೀತಿ, ಧರ್ಮ, ಮಾನವೀಯ ಪ್ರಜ್ಞೆ ಮೂಡಿಸುವಂಥ ಹಬ್ಬವಾಗಿದೆ ಎಂದು KPCC ರಾಜ್ಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ವತಿಯಿಂದ ಎಲ್ಲಾ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಇದ್ ಮುಬಾರಕ್ ಶುಭಾಶಯಗಳನ್ನು ಕೋರುತ್ತೇನೆ. ಈ ಹಬ್ಬವು ಮುಸ್ಲಿಂ ಬಾಂಧವರಿಗೆ ಪವಿತ್ರವಾದ ಹಬ್ಬವಾಗಿದೆ, ಈ ಹಬ್ಬ ಮನುಷ್ಯನಲ್ಲಿ ಸತ್ಯ, ನ್ಯಾಯ, ನೀತಿ, ಧರ್ಮ, ಮಾನವೀಯ ಪ್ರಜ್ಞೆ ಮೂಡಿಸುವಂಥ ಹಬ್ಬವಾಗಿದೆ. ವಿಶೇಷವಾಗಿ ಮುಸ್ಲಿಂ ಬಾಂಧವರಲ್ಲಿ ಇದ್ದ ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಿ ಅಲ್ಲಾಹನನ್ನು ಸಂತೃಪ್ತಿ ಪಡಿಸುವುದು ಒಂದು ಉದಾತ್ತವದಂಥ ಚಿಂತನೆಯಾಗುವಂಥ ಹಬ್ಬವಾಗಿದೆ. ಕಳೆದ ಒಂದು ತಿಂಗಳಿಂದ ಉಪವಾಸ ಮಾಡಿದ್ರಿ, ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡಿದ್ದೀರಿ, ಆದರೆ ಈ ಸಂಭ್ರಮಕ್ಕೆ ಮಹಾಮಾರಿ ಕರೋನಾ ಕಾರ್ಮೋಡ ಕವಿಯುವಂತೆ ಮಾಡಿದೆ. ಹೀಗಾಗಿ ನಾವೆಲ್ಲರೂ ಅಲ್ಲಾಹನನ್ನು ಪ್ರಾರ್ಥನೆ ಮಾಡಿ ಇಡೀ ಮನುಕುಲಕ್ಕೆ ಮಹಾಮಾರಿ ಕೊರೊನಾ ಮುಕ್ತಿಗೊಳಿಸಲು ಪ್ರಾರ್ಥನೆ ಮಾಡೋಣ. ಮತ್ತು ರಂಜಾನ್ ಹಬ್ಬ ಎಲ್ಲರಿಗೂ ಆರೋಗ್ಯ ಸಂತೋಷ ಸಮೃದ್ಧಿ ತರಲಿ ಎಲ್ಲರಿಗೂ ಒಳ್ಳೆದಾಗಲಿ ಮತ್ತೊಮ್ಮೆ ಎಲ್ಲರಿಗೂ ಹಾರ್ದಿಕ ಶುಭಾಶಯಗಳು ಕೋರುತ್ತೇನೆಂದು ಹೇಳಿದರು.
ಕೊರೊನಾ ಮುಕ್ತಿಗೊಳಿಸಲು ಪ್ರಾರ್ಥನೆ ಮಾಡೋಣ
Please follow and like us: