ಜೀವದ ಹಂಗು ತೊರೆದು ಸಮಾಜದ ಆರೋಗ್ಯಕ್ಕಾಗಿ ದುಡಿಯುತ್ತಿರುವ ಶ್ರಮಿಕ ರ್ಗವನ್ನು ಗೌರವಿಸುವುದು ಪುಣ್ಯದ ಕೆಲಸ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಬಿ.ಆರ್. ನಂಜುಂಡಪ್ಪ ತಿಳಿಸಿದ್ದಾರೆ. ಜೆಪಿ ಪರ್ಕ್ ವರ್ಡ್ ನ ಮುತ್ಯಾಲನಗರದ ತೋಟದ ಮನೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಪೌರ ಕರ್ಮಿಕರು ಇತರೆ ಕೊರೊನಾ ವಾರಿರ್ಸ್ ಗೆ ಅಭಿನಂದಿಸಿ ಸಲ್ಲಿಸಿ ಮಾತನಾಡಿದರು. ಮಹಾಮಾರಿ ಕೊರೊನಾ ಸೋಂಕು ತಡೆಗೆ ಸೇವಾ ಕರ್ಯದಲ್ಲಿ ನಿರತರಾಗಿರುವ ಪೌರ ಕರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಯ ಸೇವೆ ಅನನ್ಯವಾಗಿದ್ದು ಈ ನಿಟ್ಟಿನಲ್ಲಿ ಶ್ರಮಿಕರ ಸೇವೆಯನ್ನು ಗುರುತಿಸಿ ಅಭಿನಂದಿಸಲಾಗಿದೆ ಎಂದರು ಎಂದು ಶ್ಲಾಘಿಸಿದರು ಜಾಲಹಳ್ಳಿ ಠಾಣಾಧಿಕಾರಿ ಯಶವಂತ್ ಮಾತನಾಡಿ, ದೇಶದಲ್ಲಿನ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಗುಣಮುಖರಾಗುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ ಇದರಲ್ಲಿ ಕೊರೊನಾ ವಾರಿರ್ಸ್ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಕೊರೊನಾ ವಾರಿಯರ್ಸ್ಗೆ ಸನ್ಮಾನ
Please follow and like us: