ಗಡಿಯಲ್ಲಿ ಪಾಕ್‌ ಉಗ್ರರ ಅಟ್ಟಹಾಸ, ಯೋಧ ಕರ್ನಲ್ ಮನ್‌ಪ್ರೀತ್ ಸಿಂಗ್ ಮರಣ..!

 

ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್​ಕೌಂಟರ್ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿರುವ ಭಾರತೀಯ ಯೋಧರ ಮೃತದೇಹಗಳನ್ನು ಅವರ ಹುಟ್ಟೂರಿಗೆ ತಲುಪಿಸಲಾಗಿದ್ದು ಕುಟುಂಬಸ್ಥರು, ಬಂಧು-ಬಳಗಗಳ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು ಭಾರತ್ ಮಾತ ಕೀ ಎನ್ನುತ್ತ ತ್ರಿವರ್ಣ ಧ್ವಜವನ್ನಿಡಿದು ನೆಚ್ಚಿನ ತಮ್ಮೂರಿನ ಯೋಧನಿಗೆ ಗೌರವ ನಮನ ಸಮರ್ಪಣೆ ಮಾಡುತ್ತಿದ್ದಾರೆ. ತಂದೆಯ ಮೃತದೇಹಕ್ಕೆ 6 ವರ್ಷದ ಮಗ, 2 ವರ್ಷದ ಮಗಳು ಸೆಲ್ಯೂಟ್ ಮಾಡುತ್ತಿರೋ ದೃಶ್ಯ ನೋಡುವವರಿಗೆ ಕಣ್ಣೀರು ತರಿಸುವಂತಿದೆ.

 

ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಇವರ ಮೃತದೇಹವನ್ನು ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರ ಗರೀಬ್ದಾಸ್ ಟೌನ್‌ಶಿಪ್‌ನಲ್ಲಿರುವ ಭರೌಂಜಿಯಾನ್ ಗ್ರಾಮಕ್ಕೆ ತರಲಾಗಿದೆ. ಅವರ ಮನೆಯಲ್ಲಿ ಸಂಪೂರ್ಣ ಮೌನ ಆವರಿಸಿದ್ದು ಮೃತ ಯೋಧನ ಪತ್ನಿ ಹಾಗೂ ಕುಟುಂಬಸ್ಥರಿಗೆ ದಿಕ್ಕು ದೋಚದಂತಾಗಿದೆ.

 

ತಂದೆಯ ಮೃತ ದೇಹಕ್ಕೆ 6 ವರ್ಷದ ಮಗ ಕಬೀರ್ ಸಿಂಗ್, 2 ವರ್ಷದ ಮಗಳು ಬಾನಿ ಕೌರ್ ಸೆಲ್ಯೂಟ್ ಮಾಡುತ್ತಿರೋ ದೃಶ್ಯ ಎಂತಹವರ ಕರುಳು ಹಿಂಡುವಂತಿದೆ. ಇವರ ಸಲ್ಯೂಟ್ ನೋಡುವವರಿಗೆ ಕಣ್ಣೀರು ಬರದೇ ಇರದು. ವೀಡಿಯೋದಲ್ಲಿ ಸೆರೆಯಾಗಿರುವ ದೃಶ್ಯವು ಮಕ್ಕಳ ಮುಗ್ಧತೆಯ ಸೆಲ್ಯೂಟ್ ದುಖವನ್ನುಂಟು ಮಾಡುವಂತಿದೆ. ಇನ್ನು ಪತ್ನಿ ಜಗ್ಮೀತ್ ಗ್ರೆವಾಲ್ ಅಂತೂ ಅಕ್ಷರಶ ಕುಸಿದು ಹೋಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಜನರು ವೀರ ಯೋಧನಿಗೆ ಜೈಕಾರ ಕೂಗುತ್ತ ತ್ರಿವರ್ಣ ಧ್ವಜವನ್ನಿಡಿದು ಗೌರವ ಸಮರ್ಪಣೆ ಮಾಡಿದ್ದಾರೆ.

 

 

Please follow and like us:

tmadmin

Leave a Reply

Your email address will not be published. Required fields are marked *

Next Post

ಛೇ ಛೇ ಮೊಮ್ಮಗಳ ವಯಸ್ಸಿನ ಯುವತಿದೊಂದಿಗೆ ಈ ರೀತಿ ವರ್ತಿಸೋದಾ.? 'ಫಾರೂಕ್ ಅಬ್ದುಲ್ಲಾ' ವಿರುದ್ಧ ಬಿಜೆಪಿ ವಾಗ್ದಾಳಿ

Fri Sep 15 , 2023
ಶ್ರೀನಗರ : ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮಹಿಳಾ ಪತ್ರಕರ್ತೆಗೆ ಕೇಳಿದ ಪ್ರಶ್ನಿಗಳಿದಾಗಿ ವಿವಾದದಲ್ಲಿ ಸಿಲುಕಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಹಲವಾರು ಪತ್ರಕರ್ತರ ಸಮ್ಮುಖದಲ್ಲಿ ಯುವ ಮಹಿಳಾ ಪತ್ರಕರ್ತೆಯೊಂದಿಗೆ ವರ್ತಿಸುತ್ತಿಸಿದ ಈ ರೀತಿಗೆ ಬಿಜೆಪಿ ಕಿಡಿಕಾರಿದೆ.   ನ್ಯಾಷನಲ್ ಕಾನ್ಫರೆನ್ಸ್ ನಾಯಕ ಅಬ್ದುಲ್ಲಾ ಅವರ ನಡವಳಿಕೆಯನ್ನ ಬಿಜೆಪಿ ತೀವ್ರವಾಗಿ ಟೀಕಿಸಿದ್ದು, ಅವರ ನಡವಳಿಕೆಯನ್ನ “ಅಗೌರವ ಮತ್ತು ಅಸಹ್ಯಕರ” ಎಂದು ಕರೆದಿದೆ. ಬಿಜೆಪಿ […]

Advertisement

Wordpress Social Share Plugin powered by Ultimatelysocial