ಮುಂಗಾರು ಮಳೆ ಅಬ್ಬರಕ್ಕೆ ಒಂದೇ ದಿನ ಬೆಂಗಳೂರು ನಗರದ ಇಬ್ಬರು ಬಲಿಯಾಗಿದ್ದು, ಹಾಗೆಯೇ ಒಂದು ಹಸು ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಅಲ್ಲದೆ, 50ಕ್ಕೂ ಹೆಚ್ಚು ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪ್ರತ್ಯೇಕ ಘಟನೆಗಳಲ್ಲಿ ಒಬ್ಬರು ನಂದಿನಿ ಬಡಾವಣೆ ಲಕ್ಷ್ಮೀದೇವಿನಗರ ವಾರ್ಡ್ನ ನಿರ್ಮಾಣ ಹಂತದ ಕಟ್ಟಡದಿಂದ ಕಾಮಗಾರಿಗೆಂದು ಜೋಡಿಸಿದ್ದ ಹಾಲೋಬ್ರಿಕ್ಸ್ ಭಾರೀ ಮಳೆಗೆ ಪಕ್ಕದ ಮನೆಯ ಶೀಟ್ ಮನೆ ಮೇಲೆ ಬಿದ್ದಿವೆ, ಇದೇ ವೇಳೆ ಶಿಲ್ಪಾ ಮನೆಯೊಳಗೆ ಕುಳಿತಿದ್ದರಿಂದ 4-5 ಇಂಚಿನ ಇಟ್ಟಿಗೆಗಳು ಶಿಲ್ಪಾ ತಲೆ ಮೇಲೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿ ಯುವತಿ ಶಿಲ್ಪಾ (22) ಮೃತಪಟ್ಟಿದ್ದಾರೆ. ಇದೇ ರೀತಿ, ಜಯ ನಗರ ಖಾಸಗಿ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದು, ಸಂಜೆ 7 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಹೊರಟಿ ದ್ದ ಹೇಮಾ ಮಾಲಿನಿ (49) ಮೇಲೆ ಮರ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕೆ, ಮನೆಯಿಂದ ಸುಮಾರು ನೂರು ಮೀಟರ್ ದೂರದಲ್ಲೇ ಘಟನೆ ನಡೆದಿದೆ. ಬೇಗೂರು ಠಾಣೆ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಪ್ರಕರಣ ದಾಖಲಾಗಿದೆ.
ಧಾರಾಕಾರ ಮಳೆ ಇಬ್ಬರ ಸಾವು
Please follow and like us: