ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಕೂಲಿಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಪಡೆಯುವ ನಿಟ್ಟಿನಲ್ಲಿ ಸಂಘಟಿತರಾಗಬೇಕು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ನರಸಣ್ಣ ನಾಯಕ ಸಲಹೆ ನೀಡಿದರು. ರಾಯಚೂರು ಜಿಲ್ಲೆಯ ಜಾಲಹಳ್ಳಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯೂ ಗ್ರಾಮದ ಪ್ರದೇಶದ ಜನ ಗೂಳೆ ತಪ್ಪಿಸುವ ಉದ್ದೇಶದಿಂದ ೨೦೦೫ರಲ್ಲಿಯೇ ಕಾಯ್ದೆಯಾಗಿ ರೂಪಿಸಲಾಗಿದೆ. ರೈತರಿಗೆ ಅನುಕೂಲವಾಗುವ ಕೃಷಿ ಹೊಂಡಾ,ಬದು ನಿರ್ಮಾಣ, ಗೋಕುಂಟೆ, ಬಸಿ ಕಾಲುವೇ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳಿದ್ದು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಾಮಾನ್ಯ ಸಭೆ ಅಥವಾ ಗ್ರಾಮ ಸಭೆ ಮುಖಾಂತರ ಕೆಲಸಗಳನ್ನು ಆಯ್ಕೆ ಮಾಡಬೇಕು. ಆದರೆ ಅಧಿಕಾರಿಗಳು ಉದ್ಯೋಗ ಖಾತ್ರಿ ಸಮರ್ಪಕವಾಗಿ ಜಾರಿ ಮಾಡುವಲ್ಲಿ ವಿಫಲರಾಗಿದ್ದಾರೆ. ರೈತರು ಸಂಘಟಿತರಾಗಿ ನಿಮ್ಮ ದುಡಿಮೆಯ ಹಕ್ಕು ನೀವು ಪಡೆಯಬೇಕು ಎಂದು ಸಲಹೆ ನೀಡಿದರು. ಈ ಸಂಧರ್ಭದಲ್ಲಿ ರೈತ ಸಂಘದ ವಲಯ ಸಮಿತಿ ಕಾರ್ಯದರ್ಶಿ ಹನುಮಂತ ಮಡಿವಾಳ ಮುಖಂಡರಾದ ಶಬೀರ್ ಜಾಲಹಳ್ಳಿ ಮುಕ್ತ ಪಾಷಾ ಮೌನೇಶ ದಾಸರ್ ದುರುಗಪ್ಪ ವರಟಿ ಹಾಗೂ ಕೂಲಿಕಾರ್ಮಿಕರು ಉಸಸ್ಥಿತರಿದ್ದರು.
ಪ್ರತಿಯೊಬ್ಬ ಕೂಲಿಕಾರ್ಮಿಕರು ಸಂಘಟಿತರಾಗಬೇಕು
Please follow and like us: