ರಾಯಚೂರು ಜಿಲ್ಲಾಧಿಕಾರಿಯನ್ನು ವಜಾಗೋಳಿಸುವಂತೆ ಆಗ್ರಹ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ   ಜಾಲಹಳ್ಳಿಪಟ್ಟಣದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಸರ್ಕಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಪ್ಪು ಮಾಹಿತಿ ಒದಗಿಸಿದಕ್ಕೆ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸ ಬೇಕೆಂದು ಗ್ರಾ.ಪಂ ಮಾಜಿ ಸದಸ್ಯ ನರಸಣ್ಣ ನಾಯಕ ಆಗ್ರಹಿಸಿದರು ಪಟ್ಟಣದ ಶ್ರಮಿಕ ಭವನದಲ್ಲಿ ಮಾತನಾಡಿ ಅವರು ಕಳೆದ 6 ತಿಂಗಳ ಹಿಂದೆ ಇಲ್ಲಿನ ಗ್ರಾ.ಪಂ ಯನ್ನು ಸರ್ಕಾರ ಮೇಲ್ದರ್ಜೆಗೆ ಏರಿಸುವ ಮೂಲಕ ಸ್ಥಳೀಯ ಬಡ ಕೂಲಿ ಕಾರ್ಮಿಕರ ಬದುಕು ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಸ್ಥಗಿತಗೊಳಿಸಿ ಮುಖ್ಯಾಧಿಕಾರಿ ಯನ್ನು ಎರವಲು ಸೇವೆಗೆ ನಿಯೋಜನೆ ಮಾಡಿದ್ದಾರೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಮಾತು ಕೇಳಿಕೊಂಡು ತಪ್ಪು ಮಾಹಿತಿ ಸಲ್ಲಿಸಿ ಸರ್ಕಾರಕ್ಕೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ‌ ದಾಖಲೆ ಸಲ್ಲಿಸಿದ್ದಾರೆ. ಇಂತಹ ಬೇಜವ್ದಾರಿ ಅಧಿಕಾರಿಗಳನ್ನು ಕೂಡಲೇ  ಸೇವೆಯಿಂದ ವಜಾಗೊಳಿಸಬೇಕು  ಎಂದು ಆಗ್ರಹಿಸಿದರು .

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಸರ್ಕಾರದ ವಿರುದ್ಧ ಟಗರು ಕಿಡಿ..!

Mon Oct 4 , 2021
ರೈತರ ಮೇಲೆ ಸಚಿವರ ಮಗನ ಕಾರು ಹರಿದು, ರೈತರು ಮೃತಪಟ್ಟಿರುವ ಪ್ರಕರಣ ಬಿಜೆಪಿ ಕೊಲೆಗಡುಕ ಮನಸ್ಸಿಗೆ ಸಾಕ್ಷಿ. ರೈತರನ್ನು ಶತ್ರುಗಳೆಂದು ತಿಳಿದಿರುವ ಬಿಜೆಪಿ ಸರ್ಕಾರ ಅವರನ್ನು ಪೊಲೀಸರ ಮೂಲಕ ದಮನಿಸಲು ಯತ್ನಿಸಿ ವಿಫಲವಾದ ನಂತರ ಈಗ ನೇರವಾಗಿ ಹತ್ಯೆ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಗೂಂಡಾ ರಾಜ್ಯದಲ್ಲಿ ರೈತರು, ಮಹಿಳೆಯರು, ಬಡವರು, ದಲಿತರ ಮಾನ–ಪ್ರಾಣ ಯಾವುದೂ ಸುರಕ್ಷಿತವಲ್ಲ. […]

Advertisement

Wordpress Social Share Plugin powered by Ultimatelysocial