ವಿಜಯಪುರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ

ಕೊರೊನಾ ಮಹಾಮಾರಿ ಹಿನ್ನಲೆಯಲ್ಲಿ ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ  ಕೊರೊನಾ ರೋಗ ಪತ್ತೆಯ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯ  ಆರಂಭವಾಗಿದೆ. ವಿಧಾನ ಪರಿಷತ್ ಸದಸ್ಯ ಅರುಣ ಶಹಪೂರ,ಶಾಸಕ ದೇವಾನಂದ ಚವ್ಹಾಣ,  ಬಿ.ಎಲ್.ಡಿ.ಇ ಆಡಳಿತ ಮಂಡಳಿ ಸದಸ್ಯರಾದಂತಹ  ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಸುನೀಲಗೌಡ. ಬಿ.ಪಾಟೀಲ್, ಡಾ.ಎಂ.ಎಸ್.ಬಿರಾದಾರ ಉಪಸ್ಥಿತಿಯಲ್ಲಿ ಪೂಜೆಯೊಂದಿಗೆ ಲ್ಯಾಬ್ ತನ್ನ ಕಾರ್ಯ ಆರಂಭಿಸಿತು.‌  ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿಯೇ ಕೋವಿಡ್-19 ಶಂಕಿತರು ಹಾಗೂ ಸೋಂಕಿತರ ಆರೈಕೆಗಾಗಿ ಪ್ರತ್ಯೇಕ ವಾರ್ಡ್‍ಗಳನ್ನು ತೆರೆಯಲಾಗಿದ್ದು, ಆಸ್ಪತ್ರೆ ಪ್ರಯೋಗಾಲಯ ಆರಂಭಿಸಲು ಅನುಮತಿ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಐ.ಸಿ.ಎಂ.ಆರ್ ಒಪ್ಪಿಗೆ ಸೂಚಿಸಿರುವದು ಸಂತಸ ತಂದಿದೆ. ಇದರಿಂದ ನಮ್ಮ ಆಸ್ಪತ್ರೆಯ ಜವಾಬ್ದಾರಿ ಹೆಚ್ಚಳವಾಗಿದೆ. ಸಾಂಕ್ರಾಮಿಕ ಪೀಡುಗಾಗಿರುವ ಕೊರೊನಾ ಕಾಯಿಲೆ ಇಡೀ ಸಮಾಜವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಸಮಾಜ ಸಂಕಷ್ಟದಲ್ಲಿರುವಾಗ ನಾವು ಅವರ ಸೇವೆಗೆ ಬದ್ದ ಎಂಬ ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್‍ರವರ ಸೂಚನೆ ಮೇರೆಗೆ ದಿನದ 24 ಘಂಟೆ ಈ ಲ್ಯಾಬ್ ಕಾರ್ಯನಿರ್ವಹಿಸಲಿದ್ದು ಪ್ರತಿ ದಿನ 400 ಕೊರೋನಾ ಪರೀಕ್ಷಾ ವರದಿ ನೀಡಲು ಸಜ್ಜಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೊರೊನಾ ಆರ್ಭಟ ಹೊಸದಾಗಿ ೩೭,೭೨೪ ಮಂದಿಗೆ ವಕ್ಕರಿಸಿದೆ ಸೋಂಕು

Wed Jul 22 , 2020
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಒಂದೇ ದಿನದಲ್ಲಿ ಹೊಸದಾಗಿ 37,724 ಮಂದಿಗೆ ಮಹಾಮಾರಿ ಸೋಂಕು ವಕ್ಕರಿಸಿದೆ. ಈ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,92,915ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 648 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈವರೆಗೂ ಮಹಾಮಾರಿ ವೈರಸ್ ಗೆ ದೇಶದಲ್ಲಿ 28,732 ಮಂದಿ ಸಾವನ್ನಪ್ಪಿದ್ದಾರೆ. 11,92,915 ಮಂದಿ ಸೋಂಕಿತರ ಪೈಕಿ 7,53,050 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿನ್ನೂ […]

Advertisement

Wordpress Social Share Plugin powered by Ultimatelysocial