ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂಬ ವಿವಾದಾತ್ಮಕ ಹೇಳಿಕೆ ವಿಚಾರ..!

ಉದಯನಿಧಿ ಸ್ಟಾಲಿನ್‌  ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಕಿಡಿ..!

ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ, ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್‌  ಪುತ್ರ ಉದಯನಿಧಿ ಸ್ಟಾಲಿನ್‌  ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದರು.

ಹೌದು… ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ ಜೊತೆ ಹೋಲಿಸಿ ಹೇಳಿಕೆ ನೀಡಿರುವ ಉದಯನಿಧಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಹೇಳಿಕೆ ಹಿಂದುತ್ವವಾದಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

ಉದಯನಿಧಿ ಸ್ಟಾಲಿನ್‌ರವರ ವಿವಾದಾತ್ಮಕ ಹೇಳಿಕೆಯನ್ನು ಇದೀಗ ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಟ್ವೀಟ್‌ ಮಾಡಿರುವ ಕೆ. ಅಣ್ಣಾಮಲೈ , ಉದಯನಿಧಿ ಅವರೇ, ನೀವು ನಿಮ್ಮ ತಂದೆ ಮತ್ತು ನಿಮ್ಮ ಸಿದ್ಧಾಂತಗಳು ಕ್ರಿಶ್ಚಿಯನ್ ಮಿಷನರಿಗಳಿಂದ ಖರೀದಿಸಿದ ಕಲ್ಪನೆಯನ್ನು ಹೊಂದಿದೆ. ಅವರ ದುರುದ್ದೇಶಪೂರಿತ ಸಿದ್ಧಾಂತದ ಬೆಳೆ ತೆಗೆಯಲು ನಿಮ್ಮಂತಹ ಮಂದಬುದ್ಧಿಗಳನ್ನು ಬೆಳೆಸುವುದು ಆ ಮಿಷನರಿಗಳ ಆಲೋಚನೆಯಾಗಿದೆ. ತಮಿಳುನಾಡು ಆಧ್ಯಾತ್ಮಿಕತೆಯ ನಾಡು, ನೀವು ಮಾಡಬಹುದಾದ ಅತ್ಯುತ್ತಮವಾದುದೆಂದರೆ ಈ ರೀತಿಯ ಈವೆಂಟ್‌ನಲ್ಲಿ ಮೈಕ್ ಹಿಡಿದುಕೊಳ್ಳುವುದು ಮತ್ತು ನಿಮ್ಮ ಹತಾಶೆಯನ್ನು ಹೊರಹಾಕುವುದು ಎಂದು ವ್ಯಂಗ್ಯವಾಡಿದ್ದಾರೆ.

ಒಟ್ಟಾರೆ ತಮಿಳುನಾಡು ಸಿಎಂ ಸ್ಟಾಲಿನ್‌ರವರ ಪುತ್ರ ಉದಯನಿಧಿ ಸ್ಟಾಲಿನ್‌ರವರು ಡೆಂಗ್ಯೂ, ಮಲೇರಿಯಾವನ್ನು ಸನಾತನ ಧರ್ಮ ಇದ್ದಂತೆ ಎಂಬ ವಿವಾದಾತ್ಮಕವಾದ ಹೇಳಿಕೆಯೊಂದನ್ನು ನೀಡಿದರು. ಮತ್ತು ಈ ಹೇಳಿಕೆಯನ್ನು ಬಿಜೆಪಿ ನಾಯಕರು ವಿರೋಧಿಸುತ್ತಿದ್ದು, ಉದಯನಿಧಿ ಸ್ಟಾಲಿನ್‌ ವಿರುದ್ಧ ಹರಿಹಾಯ್ದಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಇಂಡಿಯಾ ಮೈತ್ರಿಕೂಟದಿಂದ ಸನಾತನ ಧರ್ಮಕ್ಕೆ ಅವಮಾನ-ಅಮಿತ್‌ ಶಾ..!

Sun Sep 3 , 2023
ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ, ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್‌  ಪುತ್ರ ಉದಯನಿಧಿ ಸ್ಟಾಲಿನ್‌  ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾದರು. ಹೌದು… ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ ಜೊತೆ ಹೋಲಿಸಿ ಹೇಳಿಕೆ paradormirmejor.org ನೀಡಿರುವ ಉದಯನಿಧಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಹೇಳಿಕೆ ಹಿಂದುತ್ವವಾದಿಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಉದಯನಿಧಿ ಸ್ಟಾಲಿನ್‌ರವರ ವಿವಾದಾತ್ಮಕ ಹೇಳಿಕೆಯನ್ನು ಇದೀಗ ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. […]

Advertisement

Wordpress Social Share Plugin powered by Ultimatelysocial