ರಾಯಚೂರಿನ ಕವಿತಾಳ ಪಟ್ಟಣದ ಹೊರಭಾಗದಲ್ಲಿರುವ ನಲವತ್ತು ಹೆಕ್ಟೇರ್ ಕೆರೆಯು ಸರ್ಕಾರಕ್ಕೆ ಸೇರಿದ್ದು ಆದರೆ ಇದನ್ನು ಪಟ್ಟಣದ ಕೆಲವು ಭೂ ಮಾಲೀಕರು ಆಕ್ರಮಿಸಿಕೊಂಡು ಬಹುದಿನಗಳಿಂದ ತಮ್ಮ ಹೆಸರಿಗೆ ಪಟ್ಟ, ಪಹಣಿ ಪತ್ರಿಕೆ ಮಾಡಿಸಿಕೊಂಡಿರುತ್ತಾರೆ. ಸಣ್ಣ ನೀರಾವರಿ ಇಲಾಖೆ ಇದು ತಮಗೆ ಸೇರಿದ್ದು ಎಂದು ಇಲ್ಲಿ ಮೀನು ಸಾಗಾಣಿಕೆಗಾಗಿ ಪ್ರತಿವರ್ಷ ಹರಾಜನ್ನು ನಡೆಸುತ್ತಾ ಬರುತ್ತಿದೆ ಕೆರೆಯು ಸರ್ಕಾರದ್ದೋ ಅಥವಾ ಖಾಸಗಿಯದ್ದೋ ಎಂದು ಸ್ಪಷ್ಟಪಡಿಸಬೇಕು ಹಾಗೂ ಸುಮಾರು 84 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕೆರೆಯ ಕಾಮಗಾರಿಯು ಕಳಪೆ ಮಟ್ಟದಿಂದ ನಡೆಯುತ್ತಿದೆ. ಈ ಕಳಪೆ ಕಾಮಗಾರಿಗೆ ಮುಂದಾದ ಗುತ್ತಿಗೆದಾರರ ಮತ್ತು ಸಹಕಾರ ನೀಡುತ್ತಿರುವ ಸಂಬಂಧಿಸಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಳೆದ ಕೆಲವು ದಿನಗಳ ಹಿಂದೆ ಕವಿತಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿವೈಎಫ್ಐ ಮತ್ತು ಕವಿತಾಳ ನವ ನಿರ್ಮಾಣ ವೇದಿಕೆ ವತಿಯಿಂದ ಒತ್ತಾಯ ಮಾಡಿದೆ. ಕಳೆದ ವಾರ ಸಿರವಾರ ತಹಶಿಲ್ದಾರರು ಭೇಟಿ ನೀಡಿ ಸ್ಥಳ ಪರಿಶೀಲನೆ ನೆಡಸಿ ಕ್ರಮದ ಭರವಸೆ ನೀಡಿದ್ದರು. ನಂತರ ಎಇಇ ಇಲಾಖೆಯ ವಿನೋದ್ ಕುಮಾರ್ ಗುಪ್ತಾ ರವರು ಕೆರೆಗೆ ಭೇಟಿ ನೀಡಿ ಕೆರೆಯ ಒಟ್ಟಾರೆ ಸ್ಥಳ ಮತ್ತು ಕಾಮಗಾರಿ ಯನ್ನು ಪರಿಶೀಲಿಸಿದರು.
ಸರ್ಕಾರಕ್ಕೆ ಸೇರಿದ ನಲವತ್ತು ಹೆಕ್ಟೇರ್ ಕೆರೆ ಆಕ್ರಮಣ
Please follow and like us: