ಚಿಕ್ಕಾಬಳ್ಳಾಪುರದಲ್ಲಿ ಮಹಾಮಾರಿ ಕೊರೊನಾ ನಿಯಂತ್ರಿಸಲು ಸರ್ಕಾರ ವಾರದ ಲಾಕ್ ಡೌನ್ ಜಾರಿ ಮಾಡಿದೆ ಸರ್ಕಾರದ ಮತ್ತು ಪೊಲೀಸ್ ನಿಯಮಗಳಿಗೆ ಸ್ವಲ್ಪ ಜನ ಬೆಲೆಕೊಡದೆ ಸುಖಾಸುಮ್ಮನೆ ತಿರುಗಾಡುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಕೆಲಸ ಮಾಡಲು ತುಂಬಾ ಕಷ್ಟವಾಗುತ್ತಿದೆ. ಬ್ಯಾರಿಕ್ಯೇಟ್ ಹಾಕಿರುವುದನ್ನು ಕೂಡ ಲೆಕ್ಕಿಸದೆ ತಪ್ಪಿಸಿಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ. ಪೊಲೀಸ್ ಸಿಬಂಧಿ ಇದರ ಮದ್ಯೆ ತಮ್ಮ ಪ್ರಾಣದ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ವೆಂಕಟಗಿರಿ ಕೋಟೆಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದು.ಬರುವಂತಹ ವಾಹನಗಳ ತಪಾಸಣೆ ಮಾಡಿ ಬಿಡಲಾಗುತ್ತಿದೆ.ಮತ್ತು ಸುಮ್ಮನ್ನೆ ಬಂದಂತ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.
ಸರ್ಕಾರ ವಾರದ ಲಾಕ್ಡೌನ್ ಜಾರಿ ಮಾಡಿದೆ
Please follow and like us: