ಕಳೆದ ಐದು ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ 4,257 ರಾಜ್ಯದ ರೈತರು,

ದೇಶದ ಬೆನ್ನೆಲುಬು ಎಂದೇ ಕರೆಸಿಕೊಳ್ಳುವ ‘ಅನ್ನದಾತ’ ಎಂದೇ ಕರೆಯಲ್ಪಡುವ ರೈತರ ಬದುಕು ದುಸ್ತರವಾಗಿದೆ. ಜಾಸ್ತಿ ಮಳೆಯಾದರೂ ಕಷ್ಟ, ಮಳೆ ಬಾರದಿದ್ದರೂ ಕಷ್ಟ ಎಂಬ ಪರಿಸ್ಥಿತಿಯಲ್ಲಿ ಒಂದೊಮ್ಮೆ ಒಳ್ಳೆ ಬೆಳೆ ಸಿಕ್ಕರೂ ಸಹ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇರುವುದಿಲ್ಲ.ಇಂಥಹ ಸಂದರ್ಭದಲ್ಲಿ ಅದೆಷ್ಟೋ ರೈತರು ತಮ್ಮ ಜೀವವನ್ನೆ ಕಳೆದುಕೊಂಡು ಬಿಡುತ್ತಾರೆ.

ಕಳೆದ ಐದು ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ವಿವರವನ್ನು ಬಿಡುಗಡೆ ಮಾಡಲಾಗಿದ್ದು, 2018 ರಿಂದ ಈಚೆಗೆ ಒಟ್ಟು 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೀಗೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿಗಳ ನೆರವು ಹಾಗೂ ಮೃತ ರೈತನ ಪತ್ನಿಗೆ ಮಾಸಿಕ 2000 ರೂಪಾಯಿ ಪೆನ್ಷನ್ ನೀಡುತ್ತಿದ್ದು, ಆದರೆ 4,257 ಆತ್ಮಹತ್ಯೆ ಪ್ರಕರಣಗಳ ಪೈಕಿ ಈವರೆಗೆ 3,442 ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

7ದಿನದಲ್ಲಿ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳುವಂತೆ ವಿಪ ಸದಸ್ಯ ಬೋಜೆಗೌಡರಿಗೆ ನೋಟಿಸ್.

Thu Mar 2 , 2023
  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ವಿಧಾನಪರಿಷತ್ ಸದಸ್ಯ ಬೋಜೆಗೌಡ ಅವರಿಗೆ ಜೋಶಿ ಪರ ವಕೀಲರು ನೋಟಿಸ್ ಜಾರಿ ಮಾಡಿದ್ದು ಏಳು ದಿನಗಳಲ್ಲಿ ಉತ್ತರಿಸುವಂತೆ ನೋಟಿಸ್ ನಲ್ಲಿ ತಿಳಿಸಿದ್ದಾರೆ.ಭಾರತೀಯ ವೈದ್ಯಕೀಯ ಮಂಡಳಿಗೆ ನೇಮಕಾತಿ ವಿಚಾರದಲ್ಲಿ 2 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬೋಜೆಗೌಡ ಅವರು ಆರೋಪ ಮಾಡಿದ್ದರು.ಬೋಜೆಗೌಡರ ಆರೋಪಕ್ಕೆ ಸಂಬಂಧಿಸಿದಂತೆ ಪ್ರಹ್ಲಾದ್ ಜೋಶಿ ಪರ ವಕೀಲರಾದ ಅರುಣ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಬೋಜೆಗೌಡರ […]

Advertisement

Wordpress Social Share Plugin powered by Ultimatelysocial