ಗೋಧ್ರಾ: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ರಾಮಕೃಷ್ಣ ಕುಮಾರ್ ಎಂಬ ಸಾಧುವನ್ನು ಪಂಚಮಹಲ್ ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದರೂ ಗರ್ಭ ಧರಿಸಲು ಸಾಧ್ಯವಾಗಿರಲಿಲ್ಲ.
ಹೀಗಾಗಿ, ಮಹಿಳೆ ಸಮಸ್ಯೆ ಪರಿಹಾರಕ್ಕಾಗಿ, ಆಗಾಗ್ಗೆ ಟಿಂಬಿ ಆಶ್ರಮದಲ್ಲಿರುವ ರಾಮ್ ಟೇಕ್ರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಳು. ಈ ವೇಳೆ, ಸಾಧು ಕೃಷ್ಣಕುಮಾರ್ ಎಂಬುವರೊಂದಿಗೆ ಮಹಿಳೆಗೆ ಪರಿಚಯವಾಗಿದೆ. ಮಹಿಳೆಯ ಸಮಸ್ಯೆ ಬಗ್ಗೆ ತಿಳಿದ ಸಾಧು ಮಗುವನ್ನು ಗರ್ಭಧರಿಸಲು ಸಹಾಯ ಮಾಡುವ ಭರವಸೆ ನೀಡಿದ್ದ.
ಕೆಲವು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಕೃಷ್ಣಕುಮಾರ್ ತನಗೆ ಎರಡ್ಮೂರು ಬಾರಿ ಕರೆ ಮಾಡಿದ್ದು, ಗರ್ಭ ಧರಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾಗಿ ಸಂತ್ರಸ್ತೆ ಹೇಳಿದ್ದಾರೆ. ಶುಕ್ರವಾರ, ಆರೋಪಿಯು ಕೆಲವು ಧಾರ್ಮಿಕ ಆಚರಣೆಯ ನೆಪದಲ್ಲಿ ಮಹಿಳೆಗೆ ಮತ್ತೆ ಕರೆ ಮಾಡಿದ್ದನು. ಆದರೆ, ಅವಳು ತನ್ನ ಸ್ಥಳಕ್ಕೆ ಬಂದಾಗ ಅವನು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.
https://play.google.com/store/apps/details?id=com.speed.newskannada