ಮಾರ್ಚ್ 12ಕ್ಕೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆಯಾಗಲಿದೆ. ಒಂದೆಡೆ ಈಗಾಗಲೇ ಹೆದ್ದಾರಿಗಾಗಿಯೆ ಕ್ರೆಡಿಟ್ ವಾರ್ ಜೋರಾಗಿದ್ದರೆ, ಮತ್ತೊಂದೆಡೆ ಹೆದ್ದಾರಿ ನಾಮಕರಣ ಕಗ್ಗಂಟಾಗಿಯೆ ಉಳಿದಿದೆ.
ವಿವಿಧ ಪಕ್ಷಗಳ ಶಾಸಕರು, ಸಂಸದರು ಒಂದೊಂದು ಹೆಸರು ಸೂಚಿಸಿ ಮನವಿ ಪತ್ರ ಸಲ್ಲಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.
‘ಕಾವೇರಿ’ ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ, ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರಿಡುವಂತೆ ಎಸ್.ಎಂ.ಕೃಷ್ಣ ಮನವಿ ಸಲ್ಲಿಸಿದ್ದರು.
‘ಹೆಚ್.ಡಿ.ದೇವೇಗೌಡರ’ ಹೆಸರಿಡುವಂತೆ ಜೆಡಿಎಸ್ ನಾಯಕರು ಮನವಿ ಸಲ್ಲಿಸಿದ್ದಾರೆ. ಗೊಂದಲವಿರೋ ಕಾರಣ ಹೆದ್ದಾರಿ ಲೋಕಾರ್ಪಣೆ ಮಾಡುತ್ತಿದ್ದರೂ ಹೆದ್ದಾರಿಗೆ ಅಧಿಕೃತ ನಾಮಕರಣ ಮಾಡಲಾಗುತ್ತಿಲ್ಲ ಎನ್ನಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada