ಡಿಎಂಕೆ ಕಾರ್ಯಕರ್ತ ಸೆಲ್ವಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ತಿರುಚ್ಚಿ ಬಳಿ ಇಬ್ಬರನ್ನು ಬಂಧಿಸಲಾಗಿದೆ. ಘಟನೆ ಬಳಿಕ ಇಬ್ಬರು ಚೆನ್ನೈ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಚ್ಚಿಯ ಸಮಯಪುರಂ ಚೆಕ್ ಪೋಸ್ಟ್ನಲ್ಲಿ ಅವರನ್ನು ಬಂಧಿಸಲಾಗಿದೆ.
ಆಡಳಿತಾರೂಢ ಡಿಎಂಕೆ ಪಕ್ಷದ ಸದಸ್ಯ ಸೆಲ್ವಂ ಅವರನ್ನು ಚೆನ್ನೈನ ಮಡಿಪಕ್ಕಂನಲ್ಲಿರುವ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ. ಫೆ.1ರ ಮಂಗಳವಾರದಂದು ಸೆಲ್ವಂ ಮನೆಗೆ ಹಾರ ಹಾಕುವ ನೆಪದಲ್ಲಿ ಅಪರಿಚಿತ ತಂಡವೊಂದು ನುಗ್ಗಿ ಕೊಂದಿತ್ತು.
ಇಬ್ಬರು ಆರೋಪಿಗಳನ್ನು ರಾಧಾಕೃಷ್ಣನ್ ಮತ್ತು ಧನಶೀಲನ್ ಎಂದು ಗುರುತಿಸಲಾಗಿದೆ. ಅವರನ್ನು ತಿರುಚ್ಚಿಯ ಸಮಯಪುರಂ ಪ್ರದೇಶದಲ್ಲಿ ಬಂಧಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada