ಇತ್ತೀಚಿಗೆ ತಾನೇ ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನ್ಯಾಪ್ ಆಗಿದ್ದ ಸುದ್ದಿ ಎಲ್ಲರಿಗೂ ಶಾಕ್ ಕೊಟ್ಟಿತ್ತು. ರವಿಚಂದ್ರನ್ ಶೂಟಿಂಗ್ ಮುಗಿಸಿ ಬರ್ತಿರುವಾಗ ಯಾರೋ ಅವರನ್ನ ಕಿಡ್ನ್ಯಾಪ್ ಮಾಡಿರುವಂತಹ ವೀಡಿಯೋವೊಂದು ವೈರಲ್ ಆಗಿತ್ತು . ಇದು ಜೀ ಕನ್ನಡ ವಾಹಿನಿಯ ಮುಂಬರಲಿರುವ ಯಾವುದೋ ಒಂದು ರಿಯಾಲಿಟಿ ಶೋ ಪ್ರೋಮೊ ಎಂದು ಆ ವೀಡಿಯೋ ನೋಡಿದ ತಕ್ಷಣ ಗೊತ್ತಾಗಿತ್ತು. ಆದರೆ ಯಾವ ರಿಯಾಲಿಟಿ ಶೋ, ಅದ್ರಲ್ಲೂ ರವಿಚಂದ್ರನ್ ಕಾಣಿಸಿಕೊಳ್ತಿದಾರೆ ಅಂದ್ರೆ ಯಾವುದೋ ಸ್ಪೆಷಲ್ ಶೋ ಇರಬಹುದು ಅಂತೆಲ್ಲಾ ಊಹೆ ಮಾಡಿಕೊಂಡಿದ್ದರು. ಬಹುತೇಕ ಮಂದಿ ರವಿಚಂದ್ರನ್ ಇದಾರೆ ಅಂದ್ರೆ ಯಾವುದೋ ಫಿಲ್ಮಿ ಶೋ ಇರಬಹುದು ಇಲ್ಲಾ ಅಂದ್ರೆ ಪ್ರೇಮಿಗಳಿಗೆ ಸಂಬಂಧಿಸಿದ ರಿಯಾಲಿಟಿ ಶೋ ಇರಬಹುದು ಎಂದು ಅಂದುಕೊಂಡಿದ್ರು. ಆದರೆ ರವಿಚಂದ್ರನ್ ಅವರು ಆಗಮಿಸುತ್ತಿರೋದು “ಡ್ರಾಮಾ ಜ್ಯೂನಿಯರ್ಸ್ -4” ಕ್ಕೆ.
ಹೌದು ಈಗ ಮತ್ತೊಂದು ಪ್ರೋಮೋ ರಿಲೀಸ್ ಮಾಡಿದ್ದು, ‘ಶಾಂತಿ ಕ್ರಾಂತಿ, ರಣಧೀರ, ಕಿಂದರಿಜೋಗಿ, ಹಳ್ಳಿ ಮೇಷ್ಟ್ರು, ಈ ಸಿನಿಮಾಗಳಿಗೆಲ್ಲ ನಾವು ಬೇಕು. ಈಗ ನಾವು ಬೇಡ್ವಾ? ಅಂತ ಮಕ್ಕಳು ಅವರನ್ನ ಕೇಳ್ತಾರೆ. ಅದಕ್ಕೆಲ್ಲಾ ಟೈಮ್ ಕೂಡಿಬರಬೇಕು ಅಂತ ರವಿಚಂದ್ರನ್ ಹೇಳ್ತಾರೆ. ಅದಾದ ಮೇಲೆ ಮಾಸ್ಟರ್ ಆನಂದ ಬರ್ತಾರೆ. ಈ ಬಾರಿ ‘ಡ್ರಾಮಾ ಜ್ಯೂನಿಯರ್ಸ್’ಗೆ ನೀವೇ ಜಡ್ಜ್ ಆಗಿ ಬರಬೇಕು. ಅದಕ್ಕೆ ಈ ಕಿಡ್ನ್ಯಾಪ್ ಅಂತ ಮಾಸ್ಟರ್ ಆನಂದ್ ಹೇಳ್ತಾರೆ. ಅದಕ್ಕೆ ರವಿಚಂದ್ರನ್ ಒಪ್ಪಿಗೆ ಸೂಚಿಸುತ್ತಾರೆ. ಈ ಭಾರಿ ಕ್ರೇಜಿಸ್ಟಾರ್ ಡ್ರಾಮಾ ಜ್ಯೂನಿರ್ಸ್ಗೆ ಜಡ್ಜ್ ಆಗಿ ಆಗಮಿಸುತ್ತಿದ್ದು, ಪ್ರೇಕ್ಷಕರು ರವಿಮಾಮನ ಜೊತೆ ಮಕ್ಕಳ ತರ್ಲೆ ತುಂಟಾಟಗಳು ಹೇಗಿರುತ್ತೆ ಅನ್ನೋದನ್ನ ನೋಡೋದಕ್ಕೆ ಕುತೂಹಲದಿಂದ ಕಾಯುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada