ಕಪ್ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂರ್ಜರ್ಸ್ ಬೆಂಗಳೂರು ತಂಡವು ಈ ಭಾರಿಯ ಟೂರ್ನಿಯಲ್ಲಿ ಮಿಶ್ರ ಫಲಿತಾಂಶ ಅನುಭವಿಸಿದೆ. 13 ನೇ ಆವೃತಿಯ ಟೂರ್ನಿಯಲ್ಲಿ ಆರ್.ಸಿ.ಬಿ ತಂಡವು ಒಟ್ಟು 5 ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಗೆಲುವಿನ ನಗೆ ಬೀರಿದ್ರೆ, ಎರಡರಲ್ಲಿ ಸೋಲಿನ ರುಚಿ ಕಂಡಿದೆ. ತಂಡದ ಫಲಿತಾಂಶದ ಕುರಿತು ಮೌನ ಮುರಿದಿರುವ ಆರ್.ಸಿ.ಬಿ ಕೋಚ್ ಸೈಮನ ಕ್ಯಾಟೀಚ್, “ಮುಂದಿನ ಒಂದು ವಾರದಲ್ಲಿ ಆರ್.ಸಿ.ಬಿ ತಂಡವು ನಾಲ್ಕು ಪಂದ್ಯಗಳನ್ನಾಡಲಿವೆ. ಇದರಲ್ಲಿ ಭರ್ಜರಿ ಪ್ರದರ್ಶನ ತೋರಿದ್ರೆ ಪ್ಲೇ ಆಫ್ ಅವಕಾಶ ಜೀವಂತವಾಗಿಸಬಹುದು. ಆದ್ದರಿಂದ ಮುಂದಿನ ಪ್ರತಿಯೊಂದು ಪಂದ್ಯವು ಮಹತ್ವದಾಗಿದೆ. ಮುಂದಿನ ಒಂದು ವಾರದಲ್ಲಿ ನಡೆಯುವ ನಾಲ್ಕು ಪಂದ್ಯಗಳಿಂದ ಆರ್ .ಸಿ.ಬಿ ಭವಿಷ್ಯ ನಿರ್ಧಾರವಾಗಲಿದೆ” ಎಂದು ಭವಿಷ್ಯ ನುಡಿದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೀನಯವಾಗಿ ಸೋಲು ಅನುಭವಿಸಿದೆ. ಇನ್ನೂ ಇದೇ ಶನಿವಾರ ಆರ್.ಸಿ.ಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡಲಿದ್ದು, ಗೆಲುವಿನ ಲಯಕ್ಕೆ ಮರಳುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.