ಕ್ಷೆತ್ರದಲ್ಲಿ ನೀರಾವರಿ ವಿಷಯ ಮುಂದಿಟ್ಟುಕೊಂಡು ಒಣ ರಾಜಕೀಯ ಮಾಡುತ್ತ ಕ್ಷೇತ್ರದ ಮುಗ್ಧ ಮತದಾರನ ದಾರಿ ತಪ್ಪಿಸುವ ಕೆಲಸ ಬಿಜೆಪಿ ಮತ್ತು ಕಾಂಗ್ರೆಸ್ ಮಾಡುತ್ತಿದ್ದು ಈ ಎರಡು ಪಕ್ಷಗಳು ಒಂದೇ ನಾಣ್ಯದ ಎರೆಡು ಮುಕಗಳಿದ್ದಂತೆ ಕ್ಷೇತ್ರದ ಜನರು ಹೊಸ ಬದಲಾವಣೆಗೆ ಕಾಯುತ್ತಿದ್ದಾರೆ ಎಂದು ರಾಷ್ಟ್ರ ವಾದಿ ಕಾಂಗ್ರೆಸ್ ರಾಜ್ಯದ್ಯಕ್ಷ ಆರ್ ಹರೀಶ ಹೇಳಿದರು
ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ರಾಷ್ಟ್ರೀಯ ವಾದಿ ಕಾಂಗ್ರೆಸ್ಸಿನ ಅಭಿವೃದ್ಧಿ ಪರಿವರ್ತನಾ ಪಾದಯಾತ್ರೆಗೆ ಚಾಲನೆ ನೀಡಿದರು,
ಕ್ಷೇತ್ರದಲ್ಲಿ ಕಟ್ಟಡ ನಿರ್ಮಿಸಿದರೆ ಸಾಲದು ನಾಡಿನ ಅನ್ನದಾತರು ಜನ ಸಾಮಾನ್ಯರು ನಿರುದ್ಯೋಗ ಯುವಕರಿಗೆ ಉದ್ಯೋಗ ಕೃಷಿ ಕ್ಷೇತ್ರ ಕ್ಕೆ ಹೆಚ್ಚಿನ ಆದ್ಯತೆ ನೀರಾವರಿ ಮಾಡುವಲ್ಲಿ ಎರಡು ಪಕ್ಷಗಳು ಸಂಪೂರ್ಣ ವಿಫಲರಾಗಿದ್ದಾರೆ.
ನಾನು ಈ ಕ್ಷೇತ್ರದ ಅಭಿವೃದ್ಧಿ ಗಾಗಿ ಹಾಗೂ ಯುವಕರಿಗಾಗಿ ಹಾಗೂ ಈ ಕ್ಷೇತ್ರದ ರೈತರಿಗಾಗಿ ಹತ್ತಿರದ ತುಂಗಭದ್ರ ನದಿಯಿಂದ ಸಂಪೂರ್ಣ ನೀರಾವರಿ ಮಾಡುತ್ತೇನೆಂದು ಹೇಳಿದರು.
ದೊಡ್ಡಬಸಪ್ಪ ಹಕಾರಿ ಯಲಬುರ್ಗಾ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada