ಲಾಕ್ಡೌನ್ ಹಿನ್ನಲೆ ಎಲ್ಲಾ ಉದ್ಯಮಗಳು ಸ್ಥಗೀತಗೊಂಡಿರುವAತೆ ಚಿತ್ರೋದ್ಯಮವು ಕೂಡ ಸ್ತಬ್ಧವಾಗಿದೆ. ಈ ಫ್ರೀ ಟೈಂನಲ್ಲಿ ಸಿನಿಮಾ ನಟ ನಟಿಯರು ಮನೆಯಲ್ಲಿ ಒಂದಲ್ಲಾ ಒಂದು ರೀತಿ ಕ್ರಿಯೇಟಿವಿಟಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಕೂಡ ವಿಶೇಷವಾಗಿ ಆರ್ಟ್ವೊಂದನ್ನು ರೆಡಿ ಮಾಡಿದ್ದಾರೆ. ಸನ್ನಿ ಲಿಯೋನ್ ತಾನು ನಟಿ ಅಷ್ಟೇ ಅಲ್ಲ, ಪೇಟಿಂಗ್ನಲ್ಲೂ ಕಮಾಲು ಮಾಡಬಲ್ಲೇ ಎಂಬುದನ್ನು ನಿರೂಪಿಸಿದ್ದಾರೆ. ೪೦ ದಿನ ಟೈಂ ತೆಗೆದುಕೊಂಡು […]
ಕನ್ನಡದ ಅಲ್ಲು ಅರ್ಜುನ್ ಅಂತಾನೇ ಹೆಸರಾಗಿರೋ ಸ್ಯಾಂಡಲ್ವುಡ್ ನ ಉದಯೋನ್ಮುಖ ನಾಯಕ ನಟ ಅನೀಶ್ ಲಾಕ್ಡೌನ್ ಹಿನ್ನಲೆ ಹಸಿವಿನಿಂದ ಬಳಲುತ್ತಿರುವ ಎಷ್ಟೋ ಜೀವಗಳಿಗೆ ಆಸರೆಯಾಗಿದ್ದಾರೆ. ಹೌದು ಅನಿಶ್ ಅವರ ಕು ಟುಂಬದವರೆಲ್ಲ ಸೇರಿಕೊಂಡು ಅಡುಗೆ ತಯಾರಿಸಿ ಊಟ ಸಿಗದ ೧೦೦೦ ಜನರಿಗೆ ಊಟದ ಪ್ಯಾಕೆಟ್ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ದಿನ ೧೦೦೦ ಜನರಿಗೆ ಅವರ ಕುಟುಂಬದವರಿAದ ಆಹಾರ ತಲುಪಿಸಲಾಗುತ್ತದೆ. ಈ ವರೆಗೂ ೨೫೦೦೦ ಜನರಿಗೆ ಊಟ ನೀಡಿದ್ದಾರೆ. ಕೊರೊನಾ […]
ಲಾಕ್ಡೌನ್ ಹಿನ್ನಲೆ ಮದ್ಯ ಸಿಗುತ್ತಿಲ್ಲ. ಆದ್ರೆ ಜನರಿಗೆ ಕುಡಿಯುವ ಚಪಲ ಒಂದು ಕೊಲೆಯನ್ನು ಮಾಡುವ ಹಂತಕ್ಕೆ ಕರೆದುಕೊಂಡು ಹೋಗಿತ್ತು. ಹೌದು ರೌಡಿಶೀಟರ್ ಪ್ರಕಾಶ್ ಅಲಿಯಾಸ್ ಲೂಸ್ ಎಂಬುವವನ ಕೊಲೆಗೆ ಸಂಬಂಧಿಸಿದAತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕಾಶ್ನ ಬಳಿ ಮದ್ಯ ಕೊಡುವಂತೆ ಲೊಕೇಶ್ ಜಗಳವಾಡಿದ್ದ ಪ್ರಕಾಶ್ ಇಲ್ಲ ಎಂದಿದ್ದಕ್ಕೆ ಸ್ನೇಹಿತರು ಕಾಡ್ಸ್ ಆಡುವ ನೆಪದಲ್ಲಿ ಆತನನ್ನು ಕರೆಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಈ ಕೊಲೆಯ ಬಗ್ಗೆ ಪರಿಶೀಲನೆ ನಡೆಸಿ […]
ನವದೆಹಲಿ: ಲಾಕ್ಡೌನ್ ಹಿನ್ನಲೆ ಪರೀಕ್ಷೆಗಳು ಸ್ಥಗೀತಗೊಂಡಿರುವುದರಿAದ ಲಾಕ್ಡೌನ್ ತೆರವುಗೊಳ್ಳುತ್ತಿದ್ದಂತೆಯೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಆ ವಿಚಾರವಾಗಿ ನಾನು ನಾಳೆ ರಾಜ್ಯಗಳ ಶಿಕ್ಷಣ ಸಚಿವರ ಜತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ. ಜೆಇಇ ಮೇನ್, ನೀಟ್ ಮೊದಲಾದ ಪ್ರವೇಶ ಪರೀಕ್ಷೆಗಳನ್ನು ವಿಳಂಬಗೊಳಿಸಲಾಗಿದೆಯಷ್ಟೇ. ಮೇ,ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಗಿ ಒಂದು ತಿಂಗಳಾಯಿತು. ಲಾಕ್ಡೌನ್ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ರೈತಾಪಿ ಸಮುದಾಯ. ಈ ಸಂದರ್ಭದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಅದರಲ್ಲೂ ಹಣ್ಣು, ತರಕಾರಿ, ಹೂವು ಬೆಳೆದವರು ಕಣ್ಣೀರಿಡುವಂತಾಗಿದೆ. ರೈತರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ. ಹಾಲು ಖರೀದಿಸಿ ಹಾಲು ಉತ್ಪಾದಕರಿಗೆ ನೇರವಾಗಿದ್ದೀರಿ ಹಾಗೆಯೇ […]
ನವದೆಹಲಿ: ಕೊರೊನಾ ಭೀತಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೌದು ವಿದೇಶಗಳಲ್ಲಿರುವ ೬,೩೦೦ ಭಾರತೀಯರಿಗೂ ಕೊರೊನಾ ಸೋಂಕು ಹಬ್ಬಿದೆ. ಸಿಂಗಾಪೂರ ಹಾಗೂ ಗಲ್ಫ್ ದೇಶಗಳಲ್ಲಿ ಹೆಚ್ಚಿನ ಭಾರತೀಯರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲಿನ ಸರ್ಕಾರ ಎಲ್ಲಾ ರೀತಿಯ ಸೌಕರ್ಯಗಳನ್ನು ವಸತಿ ನಿಲಯಗಳಿಗೆ ನೀಡುತ್ತಿರುವುದಾಗಿ ತಿಳಿಸಿದೆ. ಇರಾನ್ನಲ್ಲಿ ೨೨೫ ಭಾರತೀಯರಿಗೆ ಸೋಂಕು ತಗುಲಿದೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.
ಕೊರೊನಾ ಹಿನ್ನಲೆ ಲಾಕ್ಡೌನ್ನಿಂದಾಗಿ ಚಾಲಕರು ಮನೆಯಲ್ಲಿಯೇ ಕೂರುವಂತಹ ಸ್ಥಿತಿ ಉಂಟಾಗಿದೆ. ಚಾಲಕ ವೃತ್ತಿಯನ್ನೇ ನಂಬಿಕೊಂಡಿದ್ದ ಚಾಲಕರು ತೀವ್ರ ತೊಂದರೆಗೆ ಒಳಗಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸೆಲ್ಪಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ ಅಭಿಯಾನ ಆರಂಭಿಸಿದ್ದಾರೆ. ಲಾಕ್ಡೌನ್ ಜಾರಿಯಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಚಾಲಕರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸದೆ ಸರ್ಕಾರಗಳು ನಿರ್ಲಕ್ಷö್ಯ ತೋರಿವೆ ಎಂದು ಸಮಗ್ರ ಚಾಲಕರ ಒಕ್ಕೂಟ ಬೃಹತ್ ಪ್ರತಿಭಟನೆ ಆರಂಭಿಸಿವೆ. ಸಾರಿಗೆ […]
ದೆಹಲಿ: ಜನಪ್ರಿಯ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ ಅನಾರೋಗ್ಯದಿಂದ ಬಳಲುತ್ತಿದ್ದು, ಜೈಪುರದ ಬೆನಿವಲ್ ಕಾಂತಾ ಕಾಲೋನಿಯಲ್ಲಿ ನಿನ್ನೆ ತಡ ರಾತ್ರಿಯಂದು ಮೃತಪಟ್ಟಿದ್ದಾರೆ. ವಿಧಿ ಆಟ ಅಂದ್ರೆ ಇದೇ ಅನ್ಸುತ್ತೆ, ತಾಯಿ ಅಂತ್ಯ ಕ್ರಿಯೆಗೂ ಬರಲಾರದ ಸ್ಥಿತಿಯಲ್ಲಿ ಬಾಲಿವುಡ್ ನಟ. ಹೌದು ಇರ್ಫಾನ್ ನ್ಯೂರೋ ಎಂಡೋಕ್ರೆöÊನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಭೀತಿಯಿಂದ ಲಾಕ್ಡೌನ್ ಹೇರಲಾಗಿದ್ದು, ವಿಮಾನವನ್ನು ರದ್ದುಗೊಳಿಸಿರುವುದರಿಂದ ಇರ್ಫಾನ್ ಖಾನ್ […]
ಚೆನೈ: ದೇಶದೆಲ್ಲೆಡೆ ಕೊರೊನಾ ವೈರಸ್ ಹಿನ್ನಲೆಯಲ್ಲಿ ಲಾಕ್ಡೌನ್ ವಿಧಿಸಲಾಗಿದ್ದರು ಸಹಿತ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ಚೆನೈನ ತಿರುವಿಕಾ ನಗರದ ಒಂದೇ ಕುಟುಂಬದ ೧೫ ಮಂದಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಪಾಸಿಟಿವ್ ದೃಢಪಟ್ಟ ೧೫ ಮಂದಿ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರು.
ನವದೆಹಲಿ: ಕೊರೊನಾ ವೈರಸ್ ಭೀತಿಯಲ್ಲಿ ಇರುವ ಜನರಿಗೆ ಅದರ ವಿರುದ್ಧ ಹೋರಾಡಲು ಪತ್ತೆಹಚ್ಚುವ ಉತ್ತಮ ಪರೀಕ್ಷಾ ಸೌಲಭ್ಯಗಳು ಇಲ್ಲದೇ ಹೋದರೆ ಕೋವಿಡ್-೧೯ ಸವಾಲುಗಳನ್ನು ಜಯಿಸಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.