ಶಾಸಕರನ್ನು ಬಿಡದ ಭೂಗಳ್ಳರು, ಸೈಟ್‌ನ ನಕಲಿ ಖಾತೆ ಸೃಷ್ಟಿಸಿದರು.

ಬೆಂಗಳೂರು, ಜನವರಿ 20: ರಾಜ್ಯ ರಾಜಧಾನಿ ಮತ್ತು ಮಹಾನಗರವಾದ ಬೆಂಗಳೂರಿನಲ್ಲಿ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಶ್ರೀಸಾಮಾನ್ಯರ ನಿವೇಶನಗಳ ಖಾತೆ ಬದಲಾವಣೆ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಶಾಸಕರುಗಳ ನಿವೇಶನಗಳ ದಾಖಲೆಗಳನ್ನು ನಕಲು ಮಾಡಿ ಮೋಸಗೈದ ಘಟನೆ ಬೆಳಕಿಗೆ ಬಂದಿದೆ.

ಸಾಮಾನ್ಯ ಜನರನ್ನು ಕಾಡುವ ಭೂಗಳ್ಳತನದ ಭೂತ ಈಗ ಶಾಸಕರ ಬೆನ್ನಹತ್ತಿದೆ. ರಾಜ್ಯದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಸೇರಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲದರ ನಕಲು ದಾಖಲೆ‌ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಂಡು ಶಾಸಕರಿಗೆ ಮೋಸ ಮಾಡಿದ್ದಾರೆ.

ಶಾಸಕಿಗೆ ಹಂಚಿಕೆಯಾದ ಸೈಟ್‌ ಅನ್ನು ರಾಮಮೂರ್ತಿ ಅಲಿಯಾಸ್ ಮಣಿವನನ್, ಅನುರಾಧಾ, ದೀಪಿಕಾ ಸೇರಿದಂತೆ 10 ಜನ ಡೆವಲಪರ್ಸ್ ಹಾಗೂ ಬಿಲ್ಡರ್ಸ್ ಹಾಗೂ ಇನ್ನಿತರು ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಬ್ಯಾಟರಾಯನಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಆರೋಪದ ಮೇರೆಗೆ ಸದ್ಯ 8 ಜನರ ವಿರುದ್ಧ ಸಂಜಯನಗರದ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಒಂದು ಅಡಿ ಜಾಗ ಬಂಗಾರದ ಬೆಲೆಗೆ ಮಾರಾಟವಾಗುತ್ತದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಭೂಗಳ್ಳರ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಚಿನ್ನದ ಬೆಲೆಯ ಭೂಮಿ, ಜಾಗ, ನಿವೇಶನ ಎಗರಿಸಲು ಭೂಗಳ್ಳರ ದಂಡೆ ಸದಾ ಸಜ್ಜಾಗಿರುತ್ತದೆ. ಇಂತಹ ಪ್ರಸಂಗಗಳಿಗೆ ಸಾಮಾನ್ಯರಂತೆ ಈಗ ಜನಪ್ರತಿನಿಧಿಗಳು ಸಾಕ್ಷಿಯಾಗುತ್ತಿದ್ದಾರೆ.

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಮಂಜೂರಾಗಿದ್ದ ಬಿಡಿಎ ಜಿ ವರ್ಗದ ನಿವೇಶನ ಸಂಬಂಧಿಸಿದಂತೆ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ನಕಲಿ ದಾಖಲೆಗಳ ಆಧಾರದ ಮೇಲೆ ಬ್ಯಾಟರಾಯನಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ನಡೆದಿದೆ.

8 ಕೋಟಿ ಬೆಲೆ ಬಾಳುವ ಸೈಟ್

ನಗರದ ಲೊಟ್ಟೆಗೊಲ್ಲಹಳ್ಳಿ ಅಂದ್ರೆ ಸಂಜಯನಗರದ ಆರ್ ಎಂವಿ 2 ಸ್ಟೇ ಪ್ರದೇಶದಲ್ಲಿ ಶಾಸಕರಿಗೆ 50X80 ವಿಸ್ತೀರ್ಣದ ಬಿಡಿಎ ನಿವೇಶನ ಸಂಖ್ಯೆ 3 ಹಂಚಿಕೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ಎಲ್ಲ ದಾಖಲೆಗಳು ಶಾಸಕರ ಬಳಿ ಇದ್ದವು. ಈ ನಿವೇಶನದ ಪ್ರಸಕ್ತದ ಬೆಲೆ ಸುಮಾರು 8 ಕೋಟಿ ಎನ್ನಲಾಗುತ್ತಿದೆ. ತಮ್ಮ ಜಾಗಕ್ಕೆ ಶಾಸಕರು ಬೇಲಿ ಹಾಕಿಸಿದ್ದರು.

ನಕಲಿ ದಾಖಲೆಯ ಮಾಹಿತಿ ಬರುತ್ತಿದ್ದಂತೆ ಶಾಸಕರು ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ಆಧಾರದಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತಿ (ಐಪಿಸಿ) 420,465,468,471 ಸೆಕ್ಷನ್‌ಗಳಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಶಾಸಕರ ಜಾಗವನ್ನೇ ಲಪಟಾಯಿಸಲು, ನಕಲಿ ದಾಖಲೆ ಸೃಷ್ಟಿಸಲು ಹೇಗೆ ಸಾಧ್ಯವಾಯಿತು ಎಂಬ ಹಲವು ಅಂಶಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಲಗ್ಗೆ ಹಾಕುತ್ತಿದೆ.

Fri Jan 20 , 2023
ನವದೆಹಲಿ: ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಮೀರಿಸಿ ಮೊದಲ ಸ್ಥಾನಕ್ಕೆ ಲಗ್ಗೆ ಹಾಕುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಲಾಭ ಎಷ್ಟಿದೆಯೋ ಅಷ್ಟೇ ನಷ್ಟವೂ ಇದೆ. ಹಾಗಾಗಿ, ಜನಸಂಖ್ಯೆ ನಿಯಂತ್ರಣಕ್ಕೆ ಭಾರತವು ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಹೀಗಿದ್ದಾಗ್ಯೂ, ಭಾರತದ ಸಿಕ್ಕಿಮ್ ರಾಜ್ಯದಲ್ಲಿ ಪರಿಸ್ಥಿತಿ ಮಾತ್ರ ತದ್ವಿರುದ್ಧವಾಗಿದೆ. ಕನಿಷ್ಠ ಜನಸಂಖ್ಯೆಯನ್ನು ಹೊಂದಿರುವ ಸಿಕ್ಕಿಮ್‌ನಲ್ಲಿ ಫಲವತ್ತತೆ ದರ ಕುಸಿದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಮಕ್ಕಳನ್ನು ಪಡೆಯಲು ಉತ್ತೇಜನಾಕಾರಿ ಕ್ರಮಗಳನ್ನು ಸರ್ಕಾರ ಘೋಷಿಸುತ್ತಿದೆ . ಎರಡನೇ ಮಗುವನ್ನು ಹೆರುವ ಸರ್ಕಾರಿ […]

Advertisement

Wordpress Social Share Plugin powered by Ultimatelysocial