ಬೆಂಗಳೂರಿನಲ್ಲಿ ಪ್ರೇಯಸಿಯ ಬರ್ತ್ ಡೇ ಆಚರಣೆ ಬಳಿಕ ಬರ್ಬರ ಕೊಲೆ..! ಖುಷಿಯಲ್ಲಿ ಕೇಕ್ ಕತ್ತರಿಸಿದ ಬಳಿಕ ಪ್ರೇಯಸಿಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ರಾಜಗೋಪಾಲ್ ನಗರದ ಲಗ್ಗೆರೆಯಲ್ಲಿ ಘಟನೆ ನಡೆದಿದೆ. ನವ್ಯ (24) ಕೊಲೆಯಾದ ಯುವತಿ, ಪ್ರೇಮಿ ಪ್ರಶಾಂತ್ ಎಂಬಾತನಿಂದ ಕೃತ್ಯ ನಡೆದಿದೆ, ಆಂತರಿಕ ಭದ್ರತಾ ವಿಭಾಗ (ISD)ದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡ್ತಿದ್ದ ನವ್ಯ, ಕಳೆದ ಆರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರು.
ಕಳೆದ ಮಂಗಳವಾರ ನವ್ಯ ಬರ್ತಡೇ ಇತ್ತು, ಅಂದು ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ ಬರ್ತಡೇ ಸೆಲೆಬ್ರೇಷನ್ ಮಾಡಿದ್ದ, ಅದರಂತೆ ನಿನ್ನೆ ರಾತ್ರಿ ಬರ್ತಡೇ ಸೆಲೆಬ್ರೇಷನ್ ಮಾಡೊದಕ್ಕೆ ಸಿದ್ದತೆ ಮಾಡಿಕೊಂಡಿದ್ದ ಪ್ರಶಾಂತ್, ಅದರಂತೆ ಮನೆಗೆ ಕರೆಸಿಕೊಂಡು ರಾತ್ರಿ ಕೇಕ್ ಕಟ್ ಮಾಡಿ ತಿನ್ನಿಸಿದ್ದ ಪ್ರಶಾಂತ್, ಕೇಕ್ ತಿನ್ನಿಸಿದ ಬಳಿಕ ಹರಿತವಾದ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿರುವ ಪೊಲೀಸರು, ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಯಾಗಿದೆ.
https://play.google.com/store/apps/details?id=com.speed.newskannada