ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರಗಳನ್ನೇ ರೂಪಿಸ್ತಿದೆ.

ರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರಗಳನ್ನೇ ರೂಪಿಸ್ತಿದೆ. ಈ ಬಾರಿ ಮತ್ತೆ ಅಧಿಕಾರಕ್ಕೇರುವ ಪಣ ತೊಟ್ಟಿರೋ ಕಮಲ ಪಾಳಯಕ್ಕೆ ಮೋದಿ-ಅಮಿತ್ ಶಾ ಜೋಡಿಯೇ ಗೆಲುವಿನ ಸಾರಥಿಗಳು. ಹೀಗಾಗಿ ಇಬ್ಬರೂ ನಾಯಕರು ರಾಜ್ಯಕ್ಕೆ ಪದೇ, ಪದೆ ಭೇಟಿ ನೀಡ್ತಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಹಲವು ಸುತ್ತಿನ ಱಲಿ ನಡೆಸಿರೋ ನಾಯಕರು, ಇದೀಗ ಈ ತಿಂಗಳಲ್ಲೂ ಬ್ಯಾಕ್ ಟು ಬ್ಯಾಕ್ ಪ್ರವಾಸಕ್ಕೆ ಪ್ಲಾನ್ ರೆಡಿಯಾಗಿದೆ.

2023ರ ಮತ ಯುದ್ಧಕ್ಕೆ ಕೇಸರಿ ಪಡೆ ಈಗಾಗಲೇ ಸಜ್ಜಾಗಿದೆ. ಹಲವು ಸುತ್ತಿನ ಸಮರಾಭ್ಯಾಸ ನಡೆಸಿರೋ ಕಮಲ ಪಾಳಯ ನೇರವಾಗಿ ಎಲೆಕ್ಷನ್ ರಣಾಂಗಣಕ್ಕಿಳಿಯಲು ಮತ್ತಷ್ಟು ಸಿದ್ಧತೆಗಳನ್ನು ಮಾಡ್ತಿವೆ. ಈಗಾಗಲೇ ರಾಜ್ಯಕ್ಕೆ ಬಂದಿದ್ದ ಬಿಜೆಪಿಯ ವಿಕ್ಟರಿ ಜೋಡಿ ಮೋದಿ ಹಾಗೂ ಅಮಿತ್ ಶಾ ರಾಜ್ಯದಲ್ಲಿ ಮತ್ತೆ ಸರಣಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಚುನಾವಣೆಗೆ ಕೌಂಟ್​ಡೌನ್, ಬಿಜೆಪಿ ವಿಕ್ಟರಿ ಜೋಡಿಯ ರೋಡ್​ಶೋ!

ರಾಜ್ಯ ವಿಧಾನಸಭಾ ಚುನಾವಣೆಗೆ ಮೂರೇ ತಿಂಗಳು ಬಾಕಿ ಇದೆ. ದಿನಗಣನೆಯ ಲೆಕ್ಕದಲ್ಲಿ ನೂರು ದಿನಗಳೂ ಇಲ್ಲ. ಹೀಗಾಗಿ ಈ ಬಾರಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತಾ ಕೇಸರಿ ಪಡೆ ಪಣ ತೊಟ್ಟಿದೆ. ಇದಕ್ಕಾಗಿ ಬಿಜೆಪಿಯ ಘಟಾನುಘಟಿ ನಾಯಕರಾದ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ದಂಡಯಾತ್ರೆ ಕೈಗೊಂಡಿದ್ದಾರೆ. ಈಗಾಗಲೇ ಕರ್ನಾಟಕಕ್ಕೆ ಎರಡ್ಮೂರು ಬಾರಿ ಭೇಟಿ ನೀಡಿರೋ ಮೋದಿ-ಶಾ ಜೋಡಿ ಮತದಾರರ ಮನಗೆಲ್ಲುವ ಕಸರತ್ತು ಮಾಡಿದೆ. ಇದೀಗ ಮತ್ತೆ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮತಬೇಟೆಗೆ ಮುಹೂರ್ತ ಫಿಕ್ಸ್ ಆಗಿದೆ.

ಈಗಾಗಲೇ ಪ್ರಧಾನಿ ಮೋದಿ ರಾಜ್ಯಕ್ಕೆ 3 ಬಾರಿ ಭೇಟಿ ನೀಡಿದ್ದು, ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ರಣತಂತ್ರ ರೂಪಿಸಿದ್ದಾರೆ. ಜೊತೆಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಕೂಡಾ 4 ಬಾರಿ ಬಿಜೆಪಿ ನಾಯಕರಿಗೆ ಗೆಲುವಿ ಪಾಠ ಮಾಡಿದ್ದಾರೆ. ಇದೀಗ ಈ ತಿಂಗಳಲ್ಲೂ ಮೋದಿ-ಅಮಿತ್ ಶಾ ಜೋಡಿ ಮತ್ತೆ 3 ಬಾರಿ ಕರ್ನಾಟಕ ಯಾತ್ರೆ ಕೈಗೊಳ್ಳೋದು ಫಿಕ್ಸ್ ಆಗಿದೆ.

ಚುನಾವಣೆ ವರ್ಷದಲ್ಲಿ ರಾಜ್ಯಕ್ಕೆ ಬಿಜೆಪಿ ಕೇಂದ್ರ ನಾಯಕರು ಆಗಮಿಸ್ತಿದ್ದಾರೆ. ಅದ್ರಲ್ಲೂ ಮೋದಿ ಪದೇ ಪದೆ ರಾಜ್ಯಕ್ಕೆ ಬಂದು ಹೋಗ್ತಿದ್ದಾರೆ. ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಬ್ಯಾಕ್ ಟು ಬ್ಯಾಕ್ ರಾಜ್ಯ ಪ್ರವಾಸ ಮಾಡ್ತಿದ್ದಾರೆ. ಇದೀಗ ಫೆಬ್ರವರಿಯಲ್ಲಿ ಇಬ್ಬರೂ ತಲಾ 3 ಪ್ರವಾಸ ಕೈಗೊಳ್ಳಲಿದ್ದಾರೆ. ಒಂದೇ ತಿಂಗಳಲ್ಲಿ 3 ಮೂರು ಬಾರಿ ನಾಯಕರು ಭೇಟಿ ನೀಡಲಿದ್ದು, ರಾಜ್ಯಕ್ಕೆ ಬಂದು ಱಲಿಗಳನ್ನ ನಡೆಸಲಿದ್ದಾರೆ. ಱಲಿ, ಸಭೆ, ಸಮಾವೇಶಗಳ ಮೂಲಕ ಮತಗಳ ಕ್ರೋಢೀಕರಣಕ್ಕೆ ಪ್ಲಾನ್ ರೆಡಿಯಾಗಿದೆ.

ಈಗಾಗಲೇ ರಾಜ್ಯದಲ್ಲಿ ಮತಬೇಟೆ ಆರಂಭಿಸಿರೋ ಮೋದಿ-ಶಾ ಜೋಡಿ, ಈ ತಿಂಗಳಲ್ಲಿ ಮತ್ತೆ ರಾಜ್ಯಕ್ಕೆ ಆಗಮಿಸಲಿದೆ. ಸರಣಿ ಭೇಟಿ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ತಂತ್ರಗಾರಿಕೆಯನ್ನು ರೂಪಿಸ್ತಿದ್ದಾರೆ. ಮತದಾರರ ಮನಗೆಲ್ಲುವುದರ ಜೊತೆಗೆ ರಾಜ್ಯ ನಾಯಕರನ್ನು ಒಗ್ಗೂಡಿಸಿ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಲು ಭರ್ಜರಿ ಪ್ಲಾನ್ ಮಾಡ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಂಗ್ಲಾದೇಶದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಕಾನ್ಸ್ ಟೇಬಲ್ ಸಸ್ಪೆಂಡ್.

Sat Feb 4 , 2023
ಬಾಂಗ್ಲಾದೇಶದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಹಾರಾಷ್ಟ್ರದ ಕಾನ್ಸ್ ಟೇಬಲ್ ನನ್ನ ಅಮಾನತು ಮಾಡಲಾಗಿದೆ. ಅತ್ಯಾಚಾರ ಆರೋಪದಡಿ‌ ಇತ್ತೀಚೆಗೆ ಬಂಧಿಸಲಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪೊಲೀಸ್ ಪಡೆಯ ಕಾನ್ಸ್ ಟೇಬಲ್ ಅವರನ್ನು ಈಗ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸಾಂಗ್ಲಿಯ ವಿಶ್ರಂಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಡಿ ಆತನನ್ನು ಬಂಧಿಸಲಾಗಿತ್ತು. ಬಂಧನದ ನಂತರ ಸ್ಥಳೀಯ ನ್ಯಾಯಾಲಯವು ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಸಾಂಗ್ಲಿಯಲ್ಲಿ ಮಹಿಳೆಯೊಂದಿಗೆ ವಾಸಿಸುತ್ತಿದ್ದ ಬಾಂಗ್ಲಾದೇಶದ 17 […]

Advertisement

Wordpress Social Share Plugin powered by Ultimatelysocial