ಅಭ್ಯರ್ಥಿ ಆಯ್ಕೆ 2ನೇ ಪಟ್ಟಿಗೆ ಕಾಂಗ್ರೆಸ್‌ ಕಸರತ್ತು!

ಬೆಂಗಳೂರು: ಕಾಂಗ್ರೆಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮ ಗೊಳಿಸಲು ಆಯ್ಕೆ ಸಮಿತಿ ಕಸರತ್ತು ಆರಂಭಿಸಿದೆ. ಮಂಗಳವಾರದ ಸಭೆಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಮೋಹನ್‌ ಪ್ರಕಾಶ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್‌ ಭಾಗವಹಿಸಿದ್ದರು.

ತಡರಾತ್ರಿಯವರೆಗೆ ಚರ್ಚೆ ನಡೆಸಿದ ಸಮಿತಿ, ಹಾಲಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳ ಪೈಕಿ 65 ಕ್ಷೇತ್ರಗಳಲ್ಲಿ ಒಂದೊಂದೇ ಹೆಸರು ಅಂತಿಮ ಗೊಳಿಸಿದ್ದು, 4 ಹಾಗೂ 3 ಹೆಸರಿರುವ 85 ಕ್ಷೇತ್ರ ಗಳಲ್ಲಿ 2 ಹೆಸರುಗಳಿಗೆ ಇಳಿಸಲು ಕಸರತ್ತು ನಡೆಸಿತು. 25 ಕ್ಷೇತ್ರ ಗಳಲ್ಲಿ ಪ್ರಬಲ ಆಕಾಂಕ್ಷಿಗಳು ಇರುವ ಕಾರಣ ಹಲವು ಸುತ್ತಿನ ಸಮಾಲೋಚನೆ ನಡೆಯಿತು ಎನ್ನಲಾಗಿದೆ. ಬುಧವಾರವೂ ಸಮಿತಿ ಸಭೆ ನಡೆಸಲಿದೆ. ಸಭೆಯಲ್ಲಿ ವಿ. ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಸೇರಿಸಿ ಕೊಳ್ಳಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್ಚರ..! ನಿಮ್ಮ ದೇಹದಲ್ಲಿ ಈ ಲಕ್ಷಣ ಕಾಣಿಸಿದ್ರೆ, 'Vitamin D ಕೊರತೆ'ಯಾಗಿರುತ್ತೆ, ತಕ್ಷಣ ಪರಿಶೀಲಿಸಿ |

Wed Mar 8 , 2023
ಮನೆಯಲ್ಲಿ ಎಸಿ. ಕಾರಿನಲ್ಲಿ ಎಸಿ. ಕಚೇರಿಯಲ್ಲಿ ಎಸಿ. ದೇಹವು ಸೂರ್ಯನಿಗೆ ಒಡ್ಡಿಕೊಳ್ಳುವುದು ಕಮ್ಮಿಯಾಗಿರುವುದು ಸಾಮಾನ್ಯವಾಗಿದೆ. ಸ್ವಲ್ಪ ಹೊತ್ತಾದರೂ ದೇಹವು ಬಿಸಿಲಿನಿಂದ ಒಡ್ಡಿಕೊಳ್ಳಬೇಕಾಗಿದೆ. ಸೂರ್ಯನಿಂದ ದೂರವಿರಲು ಇಷ್ಟ ಪಡುತ್ತಿರೋ ಹೆಚ್ಚಿನ ಜನರು ವಿಟಮಿನ್ ಡಿ ಕೊರತೆಯಿಂದಾಗಿ ರೋಗಗಳಿಂದ ಬಳಲುತ್ತಿದ್ದಾರೆ. ವಯಸ್ಸನ್ನು ಲೆಕ್ಕಿಸದೆ ಹೆಚ್ಚಿನ ಜನರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಬಿಸಿಲಿನಿಂದ ದೂರವಿರುವುದು ಇದಕ್ಕೆ ಕಾರಣ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ವಿಟಮಿನ್ ಡಿ ಕೊರತೆಯನ್ನು ಮೊದಲೇ ಪತ್ತೆಹಚ್ಚಿದರೆ […]

Advertisement

Wordpress Social Share Plugin powered by Ultimatelysocial