ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 8 ವರ್ಷ ಅವಧಿಯ ದೇಶದಲ್ಲಿ ಅಭಿವೃದ್ಧಿಯ ನಾಗಾಲೋಟ ಆರಂಭವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಹೇಳಿದರು. ಯಲಬುರ್ಗಾ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಸಾಧನೆ ಪ್ರಣಾಳಿಕೆ ಪುಸ್ತಕ ಹಾಗೂ ತಮ್ಮ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳ ಸಾಧನೆ ಮುನ್ನೋಟ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಹರಿಶ್ಚಂದ್ರ ಬಂದರು ಕೃಷ್ಣನೀರು ಯಲಬುರ್ಗಾ ಕ್ಷೇತ್ರಕ್ಕೆ ಬರುವುದಿಲ್ಲ ನೀರಾವರಿಯ ಅಡಿಗಲ್ಲು ಅಲ್ಲ ಅಡ್ಡಗಲ್ಲು ಎಂದಿದ್ದಾರೆ ನಾನು ಕೆರೆಗಳಿಗೆ ಕೃಷ್ಣ ನೀರು ತುಂಬಿಸಿ ತೋರಿಸಿದ್ದೇನೆ ನಿಮ್ಮ ನಿಮ್ಮ ಅಧಿಕಾರ ಅವಧಿಯಲ್ಲಿ ಯಾವ ಕೆರೆ ಜೀವನ ಮಾಡಿ ನೀರು ತುಂಬಿಸಿದ್ದೀರಿ ಅನ್ನೋದನ್ನು ಈ ಕ್ಷೇತ್ರ ಜನತೆಗೆ ಹೇಳಿ,
ರಾಯರೆಡ್ಡಿವರೇ ಇನ್ನೂ ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಒದಗಿಸಿ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿ ಎಲ್ಲಾ ಶಾಲಾ ಕಾಲೇಜುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿ ಕೊಟ್ಟಿದ್ದೇನೆ ಹೀಗಾಗಿ ನನ್ನ ಅಭಿವೃದ್ಧಿ ನೋಡಿ ಹೆಚ್ಚಿನ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು ನಾನು ಸಾಮಾನ್ಯ ರೈತನ ಮಗನಾಗಿ ಇಲ್ಲಿನ ರೈತರ ಬವಣಿಗಳನ್ನು ಅರ್ಥ ಮಾಡಿಕೊಂಡು ಗ್ರಾಮೀಣ ಜನತೆಗೆ ಹಾಗೂ ಹಳ್ಳಿಗಳ ಜೀವನಾಡಿಗಳಾದ ಕೆರೆಗಳನ್ನು ಕ್ಷೇತ್ರದ ಜನೋದ್ಧಾರ ಮಾಡುವ ಮೂಲಕ ಕ್ಷೇತ್ರದಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಹರಿಯುವ ನೀರಿಗೆ ಅತಿ ಹೆಚ್ಚು ಚಕ್ ಡ್ಯಾಮ್ ಹಾಗೂ ಬ್ರಿಡ್ಜ್ & ಬ್ಯಾರೇಜ್ ನಿರ್ಮಾಣ ಮಾಡಿ ಈ ಕ್ಷೇತ್ರದ ರೈತರ ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟಿದ್ದೇನೆ ಇನ್ನೂ ಯಲಬುರ್ಗಾ ಮತ್ತು ಕುಕುನೂರು ತಾಲೂಕುಗಳಿಗೆ 750 ಸ್ಲಂ ಹಾಗೂ ನಮ್ಮ ಮನೆಗಳನ್ನು ಮಂಜೂರು ಮಾಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.
https://play.google.com/store/apps/details?id=com.speed.newskannada