ಲಕ್ಷ್ಮೇಶ್ವರ, 23: ಅಂಕೋಲಾದಲ್ಲಿ ಬಿಲಾಲ್ ಸ್ಪೋರ್ಟ್ಸ್ ವತಿಯಿಂದ ಅಂಕೋಲಾ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಲ್ ಬಿಲಾಲ್ ಮುಸ್ಲಿಮ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಸ್ಮಾಯಿಲ್ ಆಡೂರ ಮಾಲಿಕತ್ವದ ಆಝಾದ್ 11 ಲಕ್ಷ್ಮೇಶ್ವರ ತಂಡ ಪ್ರಥಮ ಬಹುಮಾನಗಳಿಸಿ ಪಟ್ಟಣ ಕೀರ್ತಿಗೆ ಪಾತ್ರವಾಗಿದೆ. ಪ್ರಥಮ ಬಹುಮಾನ 100,786 ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರು.
ಟ್ರೋಫಿ ಪಡೆದು ಮಾತನಾಡಿದ ಪ್ರಥಮ ಸ್ಥಾನ ಪಡೆದ ಆಝಾದ್ 11 ತಂಡದ ಮಾಲಿಕ ಇಸ್ಮಾಯಿಲ್ ಆಡೂರ ಯೋಗ ಮತ್ತು ಕ್ರೀಡೆಯಿಂದ ಜೀವನದಲ್ಲಿಸದೃಢ ವ್ಯಕ್ತಿಗಳಾಗಿ ಬೆಳೆಯಬಹುದು. ನಿತ್ಯ ಯೋಗ ಮಾಡುವುದರಿಂದ ಸದಾ ಉತ್ಸಾಹಿಯಾಗಿರಬಹುದು ಎಂದು ಹೇಳಿದರು.
ಜೀವನದಲ್ಲಿಯ ಉದ್ದೇಶ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಯೋಗ ಮತ್ತು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ನಮ್ಮ ಲಕ್ಷ್ಮೇಶ್ವರ ಪಟ್ಟಣದ ಕ್ರೀಡಾಪಟುಗಳು ಹಲವಾರು ಸಾಧನೆ ಮಾಡಿದ್ದಾರೆ. ಪಟ್ಟಣದಲ್ಲಿ ಕ್ರೀಡೆಗೆ ನಮ್ಮಂತಹವರು ಪ್ರೋತ್ಸಾಹ ನೀಡಬೇಕಾಗಿದೆ. ಪಟ್ಟಣದಲ್ಲಿ ಕ್ರಿಕೆಟ್ ಸೇರಿದಂತೆ ಹಲವಾರು ವಿವಿಧ ಕ್ರೀಡೆಗಳ ಕ್ರೀಡಾಪಟುಗಳು ಇದ್ದಾರೆ. ಅವರಿಗೆ ಪ್ರೋತ್ಸಾಹ ನೀಡಿ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಅಲ್ಲದೇ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಬೇಕಾಗಿದೆ. ಅಂತಹ ಕೆಲಸಕ್ಕೆ ನಾವು ಮುಂದಾಗಿದ್ದು, ಯಾವಂತಿಗು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಮುಂದಾಗುತ್ತೆವೆ. ಅಂಕೋಲಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನನ್ನ ತಂಡದಲ್ಲಿ ಆಡಿದ ಆಟಗಾರರು ತುಂಬಾ ಅದ್ಭುತ ಕ್ರೀಡಾಪಟುಗಳು, ಪ್ರಥಮ ಸ್ಥಾನಗಳಿಸಿ ಲಕ್ಷ್ಮೇಶ್ವರ ಪಟ್ಟಣದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
https://play.google.com/store/apps/details?id=com.speed.newskannada