ಚಾಮರಾಜನಗರ:ಬಿಜೆಪಿಗೆ ನಿಜಕ್ಕೂ ಗೆಲ್ಲುವ ಧೈರ್ಯ ಇದ್ದಿದ್ದರೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಯಾಕೆ ಇಷ್ಟು ಬಾರಿ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರಶ್ನೆ ಮಾಡಿದರು.ಚಾಮರಾಜನಗರದಲ್ಲಿ ಮಾಧ್ಯಮದದವರೊಟ್ಟಿಗೆ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ,ರಾಜ್ಯಕ್ಕೆ ಇಷ್ಟು ಬಾರಿ ಬರ್ತಾ ಇದಾರಲ್ಲ ರಾಜ್ಯವೇ ಮಳೆಯಿಂದ ಮುಳುಗಿದಾಗ ಏಕೆ ಬರಲಿಲ್ಲ, ಕೊರೊನಾ ಅವಾಂತರದಲ್ಲಿ ಏಕೆ ಬರಲಿಲ್ಲ, ವಿಶೇಷ ಅನುದಾನ ಏಕೆ ಕೊಡಲಿಲ್ಲ..? ಬಿಜೆಪಿಗೆ ಗೆಲ್ಲುವ ಧೈರ್ಯ ಇದ್ದಿದ್ದರೇ ಮೋದಿ ಡೆಲ್ಲಿಯಲ್ಲೇ ಕುಳಿತು ಕೈ ಅಲ್ಲಾಡಿಸಬೇಕಿತ್ತು ಎಂದು ವ್ಯಂಗ್ಯ ಮಾಡಿದ್ದಾರೆ.ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ವಿದಾಯ ಬಿಜೆಪಿಗೆ ಹಿನ್ನಡೆಯಾಗಲಿದೆ, ರಥಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಜನರು ಅವರನ್ನು ಬೈದು ಕಳುಹಿಸುತ್ತಾರೆ, ಬಿಜೆಪಿ ಕೊಡುಗೆ ರಾಜ್ಯಕ್ಕೆ ಏನೇನು ಇಲ್ಲಾ ಎಂದರು.ಬಿಜೆಪಿಯೇ ಭರವಸೆ ಎಂದು ಗೋಡೆಗಳಲ್ಲಿ ಬರೆದುಕೊಂಡಿದ್ದಾರಷ್ಟೆ, 100 ಕ್ಕೆ 100 ರಷ್ಟು ಸುಳ್ಳು ಹೇಳುವ ಸರ್ಕಾರ ಇದ್ದರೇ ಅದು ಬಿಜೆಪಿ ಮಾತ್ರ. ಒಂದಾದರು ಸತ್ಯ ಹೇಳಲಿ ನೋಡೋಣ, ಸಿದ್ದರಾಮಯ್ಯ ಅವಧಿಯಲ್ಲಷ್ಟೇ ಚಾಮರಾಜನಗರ ಅಭಿವೃದ್ಧಿಯಾಗಿದ್ದುಯಾವುದೇ ಅನುದಾನ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕ ಕಿಡಿಕಾರಿದ್ದಾರೆ.ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಆರಂಭಿಸಿದ್ದ ಯೋಜನೆಗಳಿಗೆ ಮುಂದುವರಿಕೆ ಭಾಗವಾಗಿ ಹಣ ಕೊಟ್ಟಿದ್ದಾರೆಯೇ ಹೊರತು ಹೊಸ ಅನುದಾನ ಯಾವುದು ಬಂದಿಲ್ಲ. ಅನುದಾನ ಕೊಡುವುದಾಗಿ ಚಾಮರಾಜನಗರದಲ್ಲಿ ಹೇಳಿದ ಸಿಎಂ ಬೆಂಗಳೂರಿಗೆ ಹೋಗಿ ರಿಜೆಕ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada