ಮಾಲೂರು : ಅಭಿಮಾನ ಮತ್ತು ಸರಳತೆಯಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಕನ್ನಡ ಚಿತ್ರರಂಗದ ಅನಭಿಶಕ್ತಿ ದೊರೆ ವರನಟ ಡಾ. ರಾಜಕುಮಾರ್ ಅವರು ಅಭಿಮಾನಿಗಳ ಮನದಾಳದಲ್ಲಿ ಇಂದಿಗೂ ಅಮರ ಎಂದು ಕಾಸಪ್ಪ ತಾಲೂಕು ಅಧ್ಯಕ್ಷ ಎಂ.ವಿ ಹನುಮಂತಯ್ಯ ಹೇಳಿದರು. ಪಟ್ಟಣದ ಪುರಸಭಾ ಆವರಣದಲ್ಲಿರುವ ಕರ್ನಾಟಕ ರತ್ನ, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುತ್ಥಳಿಗೆ 94 ನೇ ಜಯಂತಿ ಅಂಗವಾಗಿ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಡಾ. ರಾಜ್ಕುಮಾರ್ ಮುಂದಿನ ಯುವಪೀಳಿಗೂ ಆದರ್ಶ, ನಟ. ಇಂದಿಗೂ ಅವರ ಸಿನಿಮಾಗಳನ್ನು ಜನರು ಕುಟುಂಬ, ಸಮೇತ ಕುಳಿತು ಮತ್ತೆ ಮತ್ತೆ ನೋಡುತ್ತಾರೆ. ಈ ರೀತಿಯ, ಖ್ಯಾತಿ ಇರುವ ಏಕೈಕ ನಟ ಎಂದರೆ ಅದು ರಾಜ್ಕುಮಾರ್, ಮಾತ್ರ. ಡಾ. ರಾಜ್ಕುಮಾರ್ ಸರಳತೆಗೆ ಬ್ರಾಂಡ್ ಅಂಬಾಸಿಡರ್ ಎಂದರೆ ತಪ್ಪಾಗುವುದಿಲ್ಲ, ಅವರು ಸಣ್ಣ ಹುಡುಗನಿಂದ ಹಿಡಿದು, ವಯೋವೃದ್ಧರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.
ತೆರೆಯ ಮೇಲೆ ತಾವು ನಟಿಸಿದ ಪಾತ್ರಗಳ ಮೌಲ್ಯಗಳನ್ನು ಜೀವನದಲ್ಲೂ ಅಳವಡಿಸಿಕೊಂಡು ಜೀವಿಸಿದವರು. ಯಾವಾಗಲೂ ಬಿಳಿ ಉಡುಪು ಧರಿಸುತ್ತಿದ್ದ ರಾಜ್ಕುಮಾರ್ ನಿಜ ಸಂತನಂತೆ ಕಾಣುತ್ತಿದ್ದರು.ಯುವಕರು ಹಾಗೂ ಇಂದಿನ ನಟರು ಅವರ ಆದರ್ಶ, ಸರಳತೆಯನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಲುಸೀನಪ್ಪ ಸುಬ್ರಮಣಿ, ಎಚ್.ವಿ.ಲಿಂಗೇಶ್ವರಯ್ಯ ,ಗುಲ್ಜಾರ್, ಬಹದ್ದೂರ್ ಸಾಬ್, ಎ.ಎನ್.ದಯಾನಂದ್, ಶ್ರೀಧರ್, ಅಮರಾವತಿ, ಡಿ.ಎನ್.ಗೋಪಾಲ್, ಮಾಸ್ತಿ ಕೃಷ್ಣಪ್ಪ, ಕೆ.ಮುನಿಕೃಷ್ಣಪ್ಪ, ಜೆ.ಎಂ.ಸುರೇಶ್ ಕುಮಾರ್, ಕೆ.ತಂಗರಾಜ್ ಎಂ.ಪಿ.ಪ್ರಕಾಶ್ ಚಕ್ರವರ್ತಿ, ಮಣಿಗಂಡನ್, ಕಿರಣ್ ರಾಜ್, ಕೆಂಪನಹಳ್ಳಿ ರವಿ, ಸೇರಿದಂತೆ ಹಲವಾರು ಅಭಿಮಾನಿಗಳು ಹಾಜರಿದ್ದರು.
https://play.google.com/store/apps/details?id=com.speed.newskannada