ವಿಶ್ವವಿಖ್ಯಾತ ಹಂಪಿಗೆ ಬರುವ ವಿದೇಶಿ ಹಾಗೂ ದೇಶೀಯ ಪ್ರವಾಸಿಗರಿಗೆ ಫೆವರೆಟ್ ವಾಸಸ್ಥಳವೆಂದರೆ ಆನೇಗೊಂದಿ ಭಾಗದಲ್ಲಿ ರೇಸಾರ್ಟ್ ಗಳು. 2020 ರಲ್ಲಿ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ರೇಸಾರ್ಟ್ ಗಳನ್ನು ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ತೆರವುಗೊಳಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ರೇಸಾರ್ಟ್ ಸಮಸ್ಯೆ ಬಗೆಹರಿದಿಲ್ಲ. ಅಲ್ಲದೆ ಇದು ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ.ಈ ಮಧ್ಯೆ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ರಾಜ್ಯ ಸರಕಾರ ಈ ಭಾಗದಲ್ಲಿ ಫಾರ್ಮ್ ಹೌಸ್ ಗಳನ್ನು ನಿರ್ಮಿಸಲು ಕರಡು ಸಿದ್ದಪಡಿಸುತ್ತಿದೆ. ಈ ಮಧ್ಯೆ ಈ ಕರಡಿಗೆ ಭಾರತೀಯ ಪ್ರಾಚ್ಯ ವಸ್ತು ಇಲಾಖೆಯಿಂದ ಅಭಿಪ್ರಾಯ ಕೇಳಿದೆ. ಕೊಪ್ಪಳ ಜಿಲ್ಲೆಯ ಬಳಿಯಲ್ಲಿ ಆನೇಗೊಂದಿಯ ಬಳಿಯಲ್ಲಿದ್ದ ಫಾರ್ಮಹೌಸ್ ಗಳ ನಿರ್ಮಾಣ ನಿಯಮಾವಳಿ ಸಿದ್ದವಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಕರಡಿನ ಅಂತಿಮ ಹಂತದಲ್ಲಿದೆ. ಇದಕ್ಕೆ ಭಾರತೀಯ ಪ್ರಾಚ್ಯ ವಸ್ತು ಇಲಾಖೆಯಿಂದ ಅಭಿಪ್ರಾಯ ಕೇಳಿದೆ. ರಾಜ್ಯ ಸರಕಾರದ ನಗರಾಭಿವೃದ್ದಿ ಕೋಶದ ಕಾರ್ಯದರ್ಶಿಗಳು ಹವಾಮಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ.ವಿರುಪಾಪುರಗಡ್ಡೆ ಬಳಿಯಲ್ಲಿದ್ದ ರೇಸಾರ್ಟ್ ಗಳನ್ನು ಅರಣ್ಯ ಪ್ರದೇಶದಲ್ಲಿವೆ ಎಂಬ ಕಾರಣಕ್ಕೆ ತೆರವುಗೊಳಿಸಲಾಗಿತ್ತು. ಅಲ್ಲಿಂದ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರುತ್ತಾ ಬಂದಿದೆ. ಸಾಣಾಪುರ ಬಳಿಯಲ್ಲಿ ರೈತರು ತಮ್ಮ ಭೂಮಿಯಲ್ಲಿ ಶೇ 10 ರಷ್ಟು ಭೂ ಪ್ರದೇಶವನ್ನು ಬಳಸಿಕೊಂಡು ಫಾರ್ಮಾಹೌಸ್ ಗಳನ್ನು ನಿರ್ಮಿಸಿ ಅಲ್ಲಿ ಹೊಟೆಲ್ ಹಾಗೂ ಪ್ರವಾಸಿಗರು ವಾಸಿಸಲು ಗುಡಿಸಲು ಮಾದರಿಯಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸರಕಾರ ನಿಯಮಾವಳಿಯಲ್ಲಿ ರೂಪಿಸಿ ಅದಕ್ಕೆ ಸಾರ್ವಜನಿಕರಿಂದ ಅಹವಾಲು ಸಲ್ಲಿಸಲು ಆದೇಶ ಹೊರಡಿಸಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada