ತನಗೆ ಹೆಸರು, ಹಣ ತಂದುಕೊಟ್ಟಿದ್ದ ಬಣ್ಣದಲೋಕವನ್ನು ಬಿಟ್ಟು ರಾಜಕೀಯದಲ್ಲಿ ಸಾಧನೆ ಮಾಡಲು ಹೋಗಿ ಚಿರಂಜೀವಿ ಸೋತದ್ದು ಗೊತ್ತೇ ಇದೆ. ಇದಾದ ಹಲವು ವರ್ಷಗಳ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚಿರುವ ಮೆಗಾಸ್ಟಾರ್ ಚಿರಂಜೀವಿ “ಸೈರಾ ನರಸಿಂಹ ರೆಡ್ಡಿ” ಮೂಲಕ, ಗಾಂಧಿ ಜಯಂತಿಯ ದಿನದಂದು ತೆರೆಯಲ್ಲಿ ಆರ್ಭಟಿಸಲಿದ್ದಾರೆ. ವಿಚಾರ ಅದಲ್ಲ, ಇಲ್ಲಿ ಎರಡು ವಿಚಾರವಿದೆ. ಒಂದು, ಈ ಚಿತ್ರ ಕನ್ನಡ ಸಹಿತ ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿರುವುದು. ಇನ್ನೊಂದು, ಈ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ನೋಡುವುದಾಗಿ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಹೇಳಿರುವುದು. ಶಿವಣ್ಣ ಅವರ ಹೇಳಿಕೆ ಯಾಕೆ ಇಲ್ಲಿ ಮಹತ್ವ ಪಡೆದುಕೊಂಡಿದೆ ಅಂದರೆ, ಈ ಹಿಂದೆ ಅವರು ಹೊಂದಿದ್ದ ನಿಲುವು.
ಕಳೆದ ಒಂದೆರಡು ವರ್ಷಗಳಲ್ಲಿ ಶಿವರಾಜ್ ಕುಮಾರ್ ಅದೆಷ್ಟು ಬದಲಾಗಿ ಹೋದರು!
Please follow and like us: