ಜೈನ ಧರ್ಮದವರಿಗೆ ಸಮ್ಮೇದ ಶಿಖರಜಿ ಪವಿತ್ರ ತೀರ್ಥ ಕ್ಷೇತ್ರ ವಾಗಿರುತ್ತೆ
ತೀರ್ಥ ಕ್ಷೆತ್ರ ಶಿಖರಜಿ ಇಲ್ಲದಿದ್ದರೆ ಜೈನ ಧರ್ಮವಿಲ್ಲಾ.,
ಜಾರ್ಖಂಡ್ ಸರ್ಕಾರವು ಈ ಪವಿತ್ರ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾಡಲು ಆದೇಶ ಹೊರಡಿಸಿದ್ದಾರೆ
ಹಾಗೂ ರಾಜಸ್ತಾನದ ರಾಣಪುರ ಮತ್ತು ಕಿರನಾರ ಇವುಗಳನ್ನು ಕೂಡ ಪ್ರವಾಸಿ ತಾನವನ್ನಾಗಿ ಅಲ್ಲಿಯ ಸ್ಥಳೀಯ ಸರ್ಕಾರಗಳು ಮಾರ್ಪಡು ಮಾಡಲಾಗಿದೆ
ಮುಂದಿನ ದಿನಮಾನಗಳಲ್ಲಿ ಪವಿತ್ರ ಕ್ಷೇತ್ರದಲ್ಲಿ ಅನೈತಿಕ ಚಟುವಟಿಕೆಗಳಿಗೆ ಆಸ್ಪದ ಮಾಡಿ ಕೊಟ್ಟಹಾಗೆ ಆಗುತ್ತೆ
ಇದನ್ನು ಖಂಡಿಸಿ ಜಮಖಂಡಿಯ ಉಪ ವಿಭಾಗದ ಜೈನ ಧರ್ಮದವರು ಪ್ರತಿಭಟನೆ ಮಾಡಿದ್ದಾರೆ
ಜಮಖಂಡಿ ನಗರದ ಹಳೆ ತಹಸೀಲ್ದಾರ ಕಚೇರಿ ಇಂದ ದೇಸಾಯಿ ವೃತ್ತದ ವರೆಗೂ ಜಾತಾ ಮೂಲಕ ಶಾಂತಿಯುತವಾದ ಪ್ರತಿಭಟನೆ ನಡೆಸಲಾಯಿತು
ನಗರದ ದೇಸಾಯಿ ವೃತ್ತದಲ್ಲಿ ಕೆಲಕಾಲ ರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡಲಾಯಿತು
ಸುಮಾರು 5000 ಕ್ಕೂ ಹೆಚ್ಚು ಜೈನ ಧರ್ಮ ಸಮಾಜದವರು ಪಾಲ್ಗೊಂಡಿದ್ದರು
ಕೂಡಲೇ ಮಾಡಿದಂತ ಆಜ್ಞೆಯನ್ನು ವಾಪಸ್ಸು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಭಾರತಾದ್ಯಂತ ಉಗ್ರವಾಗಿ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜೈನ ಸಮಾಜದವರಿಂದ ನಗರದ ಉಪ ವಿಭಾಗಧಿಕಾರಿಗಳ ಮೂಲಕ ಪ್ರದಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada