ಇವತ್ತು ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮ ಇದೆ.ಮೊದಲು ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡ್ತೆವೆ.ಅಲ್ಲಿಂದ ಸುವರ್ಣ ಸೌಧಕ್ಕೆ ಪಾದಯಾತ್ರೆ ಇದೆ ಎಂದು ಧಾರವಾಡದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ…ನಾವು ಎಲ್ಲರೂ ರಾತ್ರೋರಾತ್ರಿ ಕರವೇ ಕಾರ್ಯಕರ್ತರು ಬೆಳಗಾವಿಗೆ ಬಂದಿದ್ದಾರೆಇನ್ನು ಹಲವು ಕಾರ್ಯಕರ್ತರು ಬರುತಿದ್ದಾರೆ.೧೨ ಗಂಟೆಗೆ ಸುವರ್ಣ ಸೌಧಕ್ಕೆ ಹೋಗ್ತೆವೆ..ಹಲವು ವರ್ಷಗಳಿಂದ ಎಂ ಇ ಎಸ್ ಪುಂಡಾಟಿಕೆ ನೋಡುತ್ತ ಬಂದಿದ್ದೆನೆ…ಅವರು ಈಗ ಕನ್ನಡದ ಬಾವುಟ ಸುಡುವದು ಸಂಗೋಳ್ಳಿ ರಾಯಣ್ಣ ನ ಮೂರ್ತಿ ಭಗ್ನ ಮಾಡುವುದು.ಕನ್ನಡದ ವಾಹನ ಸುಡುವದು ಮಾಡುವದು.ಇಂಥ ಪುಂಡಾಟಿಕೆ ಮಾಡುತ್ತಲೇ ಬಂದಿದ್ದಾರೆ.ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಎಂಇಎಸ್ ಪುಂಡರು.ನಾವು ರಾಜ್ಯ ಸರ್ಕಾರಕ್ಕೆ ನಾವು ಎಂಇಎಸ್ ನಿಷೇಧ ಮಾಡಲು ಒತ್ತಾಯಿಸಿದ್ದೆವೆ.ಆದರೆ ಅವರು ಎಂಇಎಸ್ ಒಲೈಸುತ್ತಲೇ ಬಂದಿದ್ದಾರೆ.ಇದರಿಂದ ಮಿತಿಮೀರಿ ಗುಂಡಾಗಿರಿ ದಾದಾಗಿರಿ ಮಾಡುತಿದ್ದಾರೆ.ಸಿಎಂಗೆ ಹಾಗೂ ಗೃಹ ಸಚಿವರಿಗೆ ಭೇಟಿ ಮಾಡಿ ಹೇಳಲು ಬಂದಿದ್ದೆವೆ.ಸಾವಿರಾರು ಕಾರ್ಯಕರ್ತರು ಬರಲಿದ್ದಾರೆ
ಬೆಂಗಳೂರಿನಿಂದ ನೂರು ವಾಹನ ಬಂದಿವೆ.೧೯೯೯ ರಿಂದ ಇದನ್ನ ಎರುರಿಸಿಕೊಂಡೇ ಬಂದಿದ್ದೆವೆ.ಬೆಳಗಾವಿ ಗೆ ೭ ಜನ ಎಂಇಎಸ್ ಶಾಸಕರು ಆಯ್ಕೆ ಆಗುತಿದ್ದರು.ಈಗ ಅವರು ಯಾರೂ ಇಲ್ಲ,ನೆಲ ಕಚ್ಚಿದ್ದಾರೆ.ಅದನ್ನ ಸಹಿಸಿಕೊಳ್ಳಲು ಆಗದೇ ಅವರು ಗುಡಾಗಿರಿ ಮಾಡುತಿದ್ದಾರೆ.ಅದನ್ನ ಬೆರು ಸಮೇತ ಕಿತ್ತು ಹಾಕಬೇಕು ಎಂದರು..ಇನ್ನು ಬೆಳಗಾವಿ ಶಾಸಕರು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ.ಅವರು ಧ್ವನಿಯತ್ತಬೇಕು, ಇಲ್ಲದಿದ್ದರೆ ನಾವು ಧ್ವನಿ ಎತ್ತಬೇಕಾಗುತ್ತೆ ನಮ್ಮಸರ್ಕಾತ ರಣ ಹೇಡಿ ಸರ್ಕಾರ ಆಗಬಾರದು.ನಮ್ಮ ಪೊಲೀಸ್ ವ್ಯವಸ್ಥೆ ರಣಹೇಡಿ ಅಲ್ಲ.ಅದಕ್ಕೆ ಇವರನ್ನ ಬಗ್ಗು ಬಡಿಯ ಬೇಕು.ಪೊಲೀಸರು ಏನಾದ್ರು ಮಾಡಲಿ ನಾನು ಅಂಜಲ್ಲ, ಹಿಂದೆ ಸರಿಯಲ್ಲ.ಉದ್ದೇಶದಂತೆ ಬೆಳಗಾವಿಗೆ ಹೊಗಿ ಮುತ್ತಿಗೆ ಹಾಕ್ತೆವೆ.ಕರವೇ ಉದ್ದೇಶ ಇಡೆರಿಸಿಕೊಳ್ಳಲಿದೆ ನಾವು ಸುವರ್ಣ ಸೌಧ ಕ್ಕೆ ಹೋಗೇ ಹೋಗ್ತೆವಿ ಎಂದ ನಾರಾಯಣಗೌಡ್ರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada