ನಡುರಾತ್ರಿ ರಸ್ತೆ ಗುಂಡಿಗಳ ಮುಚ್ಚಿದ ಕಾರುಣ್ಯ ರಾಮ್:

ಟ, ನಟಿಯರು ಸಾಮಾಜಿಕ ಕೆಲಸಗಳು ಮೂಲಕ ಆಗಾಗ ಮೆಚ್ಚುಗೆ ಘಳಿಸುತ್ತಿರುತ್ತಾರೆ. ಇದೀಗ ನಟಿ ಕಾರುಣ್ಯ ರಾಮ್ ಜನ ಮೆಚ್ಚುವಂತಹ ಕೆಲಸ ಮಾಡಿ, ಸಾರ್ವಜನಿಕರಿಂದ ಶಹಭಾಷ್ ಎನಿಸಿಕೊಂಡಿದ್ದಾರೆ.ತಮ್ಮ ರಾಜರಾಜೇಶ್ವರಿ ನಗರ ಏರಿಯಾ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವ ಮೂಲಕ ಕಾರುಣ್ಯ ರಾಮ್ ಪ್ರಶಂಸೆಗೆ ಕಾರಣರಾಗಿದ್ದಾರೆ.

ನಿನ್ನೆ ರಾತ್ರಿ ಹನ್ನೊಂದು ಗಂಟೆಯ ಹೊತ್ತಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಳಿಗೆ ಇಳಿದ ಕಾರುಣ್ಯ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿದ್ದಾರೆ. ಅವರ ಈ ಕೆಲಸಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ನಟಿ ಕಾರುಣ್ಯ ರಾಮ್. ‘ಎರಡು ಘಟನೆಗಳಿಂದಾಗಿ ನಾನು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲು ಹೊರಟೆ. ನನ್ನ ಸ್ನೇಹಿತರೊಬ್ಬರ ತಂದೆ ತಾಯಿ ವಾಹನ ಓಡಿಸುವಾಗ ರಸ್ತೆಗುಂಡಿಗೆ ಬಿದ್ದು ಆಸ್ಪತ್ರೆ ಸೇರಿದರು. ಅದರಲ್ಲಿ ಒಬ್ಬರು ಮೃತರಾದರು. ಅಲ್ಲದೇ, ನನ್ನ ಕಣ್ಣಾರೆ ಹುಡುಗಿಯೊಬ್ಬಳು ರಸ್ತೆ ಗುಂಡಿಯಲ್ಲಿ ಬಿದ್ದದ್ದು ನೋಡಿದೆ. ಹಣಕ್ಕಿಂತಲೂ ಜೀವ ಅಮೂಲ್ಯ. ಈ ರೀತಿಯಲ್ಲಿ ಪ್ರಾಣ ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಗುಂಡಿ ಮುಚ್ಚಲು ಮುಂದಾದೆ’ ಎಂದಿದ್ದಾರೆ.

‘ಸರಕಾರ ಅಥವಾ ಜನಪ್ರತಿನಿಧಿಗಳನ್ನು ಬೈಯುತ್ತಾ ಕೂರುವ ಬದಲು, ನಮ್ಮ ಮನೆ, ಏರಿಯಾ ಸುತ್ತಲೂ ಇರುವ ಒಂದೊಂದು ಗುಂಡಿಯನ್ನು ಮುಚ್ಚಿದರೆ ಸಾಕು. ಗುಂಡಿ ಮುಕ್ತ ಬೆಂಗಳೂರು ಮಾಡಬಹುದು. ಜನರು ಮನಸ್ಸು ಮಾಡಬೇಕು ಅಷ್ಟೆ. ಜೀವ ನಮ್ಮದೆ. ಹಾಗಾಗಿ ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ಇದು ನಾನು ಕಂಡುಕೊಂಡ ಸತ್ಯ. ಈ ಸೂತ್ರವೇ ನನ್ನನ್ನು ಪ್ರೇರೇಪಿಸಿತು’ ಎಂದು ಕಾರುಣ್ಯ ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿನುಗು ತಾರೆ ಕಲ್ಪನಾ ಕಂಡು ಅಣ್ಣಾವ್ರು ಕೈ ಮುಗಿದಿದ್ದು ಏಕೆ?.

Fri Mar 3 , 2023
  ಕನ್ನಡ ಸಿನಿಮಾರಂಗದಲ್ಲಿ  ಮಿನುಗು ತಾರೆ ಕಲ್ಪನಾ ಬಗ್ಗೆ ಇರೋ ಗೌರವ ವಿಶೇಷವಾಗಿದೆ. ಕಲ್ಪನಾ ಅಭಿನಯದ  ವಿಷಯದಲ್ಲಿ ಎಲ್ಲರೂ ತಲೆ ಬಾಗಲೇಬೇಕು. ಶರಪಂಜರ ಸಿನಿಮಾ ಅದಕ್ಕೆ ದಿ ಬೆಸ್ಟ್ ಎಕ್ಸಾಂಪಲ್. ಅದನ್ನೂ ಮೀರಿಸೋ ಇನ್ನೂ ಒಂದು ಸಿನಿಮಾ ಇದೆ.ಅದು ಎರಡು ಕನಸು  ಅಂತ ಹೇಳಬಹುದು. ಡಾಕ್ಟರ್ ರಾಜ್​ಕುಮಾರ್ ಮತ್ತು ಕಲ್ಪನಾ ಅವರ ಜೋಡಿಯ ಈ ಚಿತ್ರದಲ್ಲಿ ಮಂಜುಳಾ ಕೂಡ ಇದ್ದಾರೆ. ಆದರೆ ಕಲ್ಪನಾ ತಮ್ಮ ಅಭಿನಯದಿಂದಲೇ ಈ ಚಿತ್ರದಲ್ಲಿ ಜನಮನ […]

Advertisement

Wordpress Social Share Plugin powered by Ultimatelysocial