ಬೀದರ್ ನ ಬಸವಕಲ್ಯಾಣ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿದ ಬಂಡಾಯದ ಬಿಸಿ, ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಿಎಂ ದಿವಂಗತ ಧರ್ಮಸಿಂಗ್ ಪುತ್ರ ವಿಜಯ ಸಿಂಗ್ ಅವರಿಗೆ ಟಿಕೆಟ್ ಘೊಷಣೆಯಾದರು ಸಹ ಟಿಕೆಟ್ ಉಳಿದ ಟಿಕೆಟ್ ಅಂಕಾಕ್ಷಿಗಳಿಂದ ಕಾದು ನೊಡುವ ತಂತ್ರ ದಿವಂಗತ ಮಾಜಿ ಶಾಸಕ ಸಿ ನಾರಾಯಣರಾವ್ ಅವರ ಧರ್ಮಪತ್ನಿ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿ ಮಾಲಾ ಬಿ ನಾರಾಯಣರಾವ್ ಅವರಿಂದ ಸುದ್ದಿಗೊಷ್ಠಿ, ಪತ್ರಿಕಾಗೋಷ್ಠಿಯಲ್ಲಿ ಗಳಗಳನೆ ಕಣ್ಣಿರಿಟ್ಟ ಮಾಲಾ ಬಿ ನಾರಾಯಣರಾವ್…! ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿದ್ಧಕ್ಕಾಗಿ ಪತ್ರಕರ್ತರ ಮುಂದೆಯೆ ಕಣ್ಣಿರಿಟ ಮಾಲಾ ಬಿ ನಾರಾಯಣರಾವ್, ವಿಜಯಸಿಂಗ್ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ದುಡ್ಡನ್ನು ನಿಡಿ ಟಿಕೆಟ್ ನ್ನು ಖರಿದಿ ಮಾಡಿದ್ದಾರೆ ಎಂದು ಗಂಭಿರ ಆರೊಪ ಮಾಡಿದ್ಧಾರೆ. ಅಲ್ಲದೆ ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲೆ ಇದ್ಧುಕೊಂಡೆ ನನ್ನನ್ನು ಸೊಲಿಸಿದ್ಧೆ ವಿಜಯಸಿಂಗ್..
ವಿಜಯಸಿಂಗ್ ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಮಗ ಅವರು ಬೆರೆ ವಿಧಾನಸಭೆ ಕ್ಷೇತ್ರದಲ್ಲಿ ನಿಲ್ಲಬಹುದಿತ್ತು ಆದರೆ ಅವರು ಬಸವಕಲ್ಯಾಣ ಮತಕ್ಷೆತ್ರಕ್ಕೆ ಬಂದು ಟಿಕೆಟ್ ಪಡೆದುಕೊಂಡು ನನ್ನಂತ ಬಡ ಹೆಣ್ಣು ಮಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೊಪಿಸಿದ್ಧಾರೆ, ಮುಂದಿನ 20 ತಾರಿಕಿನ ತನಕ ಕಾದು ನೊಡುತ್ತೆನೆ ಟಿಕೇಟ್ ನಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾಯಿಸಿ ನನಗೆ ಟಿಕೆಟ್ ನಿಡುವ ಭರವಸೆ ಇದೆ ಎಂದು ತಿಳಿಸಿದ್ಧಾರೆ, ಒಂದು ವೆಳೆ ಟಿಕೆಟ್ ಸಿಗದೆ ಇದ್ದರೆ 20 ತಾರಿಕಿನ ನಂತರ ಕಾರ್ಯಕರ್ತರು ಹಾಗು ಕೊಲಿ ಸಮಾಜದ ಜನರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೆನೆ ಎಂದು ತಿಳಿಸಿದ್ಧಾರೆ.
https://play.google.com/store/apps/details?id=com.speed.newskannada