ಚುನಾವಣೆ ಖರ್ಚಿಗೆ ಜನರೇ ಕಳುಹಿಸುತ್ತಿದ್ದಾರಂತೆ ಹಣ
ಚಿಕ್ಕನಾಯಕನಹಳ್ಳಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗೆ ಸುರೇಶ್ ಬಾಬು ಗೆ ಬರ್ತೀದೆ ಬಡವರ ಹಣ.
6 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 3 ಬಾರಿ ಸೋತಿರುವ ಸುರೇಶ್ ಬಾಬು
ಸದ್ಯ ಹಣಕಾಸಿನ ತೊಂದರೆಗೆ ಸಿಲುಕಿರುವ ಸುರೇಶ್ ಬಾಬು
ಈ ವಿಚಾರ ಅರ್ಥ ಮಾಡಿಕೊಂಡು ಜನರೇ ಚುನಾವಣೆಗೆ ಹಣ ಕಳುಹಿಸುತ್ತಿದ್ದಾರಂತೆ
ದಿನ ನಿತ್ಯ ಮಕ್ಕಳ ಕೈಲಿ ಕಳಿಸ್ತಾರೆ ಸಾವಿರ ಸಾವಿರ ಹಣ.
ಎಲೆ ಅಡಿಕೆ ಜೊತೆ ಬರೋ ಹಣ ಯಾರದ್ದೆಂದು ಗೊತ್ತಿಲ್ಲ
ಚುನಾವಣೆ ಖರ್ಚಿಗಾಗಿ ಎಂದು ಮಕ್ಕಳ ಕೈನಿಂದ ಬರೋ ಹಣ.
ಹಣ ಕಳಿಸಿದವರು ಯಾರೆಂದು ತಿಳಿಯದಂತೆ ಹಣ ನೀಡುತ್ತಿರೋ ಬಡವರು
ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ಮನೆಗೆ ಬರೋ ಹಣ.
ವಾರಕ್ಕೆ ಎರಡು ಮೂರು ಭಾರಿ ಬರುವ ಹಣ.
ನಾನಿಲ್ಲ ಅಂದ್ರೆ ಮಕ್ಕಳು ಮನೆಯ ಟೇಬಲ್ ಮೇಲೆ ಇಟ್ಟಿರುತ್ತಾರೆ ಎಂದ ಸುರೇಶ್ ಬಾಬು.
ಎಲೆ ಅಡಿಕೆ ಜೊತೆ ಹಣ ಕಳಿಸುವ ಬಡವರು.
ಐನೂರ ರೂಪಾಯಿ ನೋಟು, ನೂರರ ನೋಟು, ಚಿಲ್ಲರೆ ಕಾಸಿನ ಹಣ.
ಚುನಾವಣೆಗೆ ಹಣ ಇಲ್ಲ ಎಂದು ಹಣ ಕಳಿಸಿದ್ದಾರೆಂದ ಸುರೇಶ್ ಬಾಬು.
ಕಳೆದ ಎರಡು ತಿಂಗಳಲ್ಲಿ ಈವರೆಗೆ ಒಂದು ಲಕ್ಷ ಚಿಲ್ಲರೆ ಹಣ ಕಳಿಸಿರೋ ಜನತೆ.
https://play.google.com/store/apps/details?id=com.speed.newskannada